ಸ್ಪೀಕರ್ ಯು.ಟಿ ಖಾದರ್ ಬಿಜೆಪಿ 18 ಶಾಸಕರನ್ನು ಸದನದಿಂದ ಹೊರ ಹಾಕಿದ ಕುರಿತು ಮಾತನಾಡಿದ ಈಶ್ವರಪ್ಪ ‘ ಸ್ಪೀಕರ್ 18 ಶಾಸಕರನ್ನು ಹೊರಗೆ ಹಾಕಿ ಖದರ್ ತೋರಿಸಿದ್ದಾರೆ. ಆದರೆ ಅದೇ ಖದರ್ನ್ನು ರಾಜಣ್ಣ ಮಾತನಾಡುವಾಗ ತೋರಿಸಬೇಕಿತ್ತು. ಯಾವನೋ ಕುಡುಕನ ರೀತಿಯಲ್ಲಿ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮಾತನಾಡಿದ್ದಾರೆ.ಆಗ ಸ್ಪೀಕರ್ ಅವರು ರಾಜಣ್ಣನಿಗೆ ಹೊರಗೆ ಹಾಕುವ ಖದರ್ ತೋರಿಸಬೇಕಿತ್ತು. ಸಿದ್ದರಾಮಯ್ಯನವರಾದರು ಈ ಕುರಿತು ಮಾತನಾಡದಂತೆ ತಡೆಯಬಹುದಿತ್ತು ಎಂದು ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್ನಲ್ಲಿ 15,568 ಕೋಟಿ ಮೊತ್ತದ ಹಗರಣ..!
ರಾಜಣ್ಣ ಇಡೀ ರಾಜ್ಯದ ಮಾನವನ್ನು ದೇಶದ ಮುಂದೆ ಹರಾಜು ಹಾಕಿದ್ದಾರೆ. ವಿಧಾನಸೌಧದ ಪಾವಿತ್ರ್ಯತೆಯನ್ನು ರಾಜಣ್ಣ ಹಾಳು ಮಾಡಿದ್ದಾರೆ. ಕೂಡಲೇ ರಾಜಣ್ಣರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ರಾಜಣ್ಣನಂತಹ ಕೀಳುಮಟ್ಟದ ಮಂತ್ರಿಯನ್ನಿಟ್ಟುಕೊಂಡು ರಾಜ್ಯದಲ್ಲಿ ಸರ್ಕಾರ ಇರಬಾರದು. ಕೂಡಲೇ ರಾಜ್ಯಪಾಲರು ಈ ಸರ್ಕಾರವನ್ನು ಕಿತ್ತೊಗೆಯಬೇಕು.
ರಾಜಣ್ಣನ ನೀಚತನದಿಂದ ಟಿವಿ ನೋಡುವುದೆ ತಪ್ಪಾಗಿದೆ