Sunday, February 23, 2025

25 ಜನ ಪ್ರಯಾಣಿಸುತ್ತಿದ್ದ ಬಸ್​ ಪಲ್ಟಿ: ಕ್ಷಣಾರ್ಧದಲ್ಲಿ ತಪ್ಪಿತು ಭಾರೀ ದುರಂತ

ದೇವನಹಳ್ಳಿ : ನಾಮಕರಣಕ್ಕೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಮೂರು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ತುಮಕೂರಿನ ಶಿರಾದಿಂದ 25 ಜನರನ್ನು ಕರೆ ತರುತ್ತಿದ್ದ ಮಿನಿ ಬಸ್​ ಯಲಹಂಕದಲ್ಲಿ ನಡೆಯುತ್ತಿದ್ದ ನಾಮಕರಣ ಕಾರ್ಯಕ್ರಮಕ್ಕೆ ಬರುತ್ತಿತ್ತು. ಆದರೆ ಅದೇನಾಯಿತೋ ಏನೋ ದೊಡ್ಡಬಳ್ಳಾಪುರದ‌ ಮೇಷ್ಟ್ರು ಮನೆ ಗೇಟ್ ಬಳಿ ಬಸ್​ ಪಲ್ಟಿಯಾಗಿದ್ದು. ಮೂರು ಜನರಿಗೆ ಗಂಭೀರ ಗಾಯವಾಗಿದೆ. ಬಸ್​​ ಪಲ್ಟಿಯಾದ ಹಿನ್ನಲೆ ಬಸ್​ನ ಗಾಜುಗಳು ಪುಡಿಪುಡಿಯಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು. ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಇದನ್ನೂ ಓದಿ :ಸಚಿವ ಸ್ಥಾನ ಬೇಡ ಎಂದ ಪರಂಗೆ ಸಿಎಂ ಆಗಿ ಎಂದು ಹುರಿದುಂಬಿಸಿದ ‘ಕೈ’ ಕಾರ್ಯಕರ್ತರು

ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸ್​​ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ರಸ್ತೆಯಲ್ಲಿದ್ದ ಗಾಜಿನ ಪೀಸ್​​ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES