Wednesday, April 2, 2025

KSRTC ಬಸ್ ಮತ್ತು ಬೈಕ್​ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾ*ವು, ಮತ್ತೊರ್ವ ಗಂಭೀರ

ಕೊಪ್ಪಳ : KSRTC ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಕೊಪ್ಫಳದಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 28 ವರ್ಷದ ಮಂಜುನಾಥ್​ ಹಂದ್ರಾಳ್​ ಎಂದು ಗುರುತಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ, ಜೂರಟಗಿ ಬಳಿ ಘಟನೆ ನಡೆದಿದ್ದು. ಸಿದ್ದಾಪುರದಿಂದ ಕಾರಟಗಿಗೆ ತೆರಳುವ ಮಾರ್ಗ‌ ಮದ್ಯದಲ್ಲಿ ಅಪಘಾತ ಸಂಭವಿಸಿದೆ. ಬಸ್​ ಚಾಲಕನ ಅಚಾರ್ತುಯವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಬೈಕ್​ ಸವಾರ ಸಾವನ್ನಪ್ಪಿದ್ದು. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಆಸ್ತಿಕತೆ, ನಾಸ್ತಿಕತೆ ಎಲ್ಲವನ್ನು ಗೌರವಿಸಬೇಕು : ಡಾಲಿ ಧನಂಜಯ್

ಮೃತರನ್ನು ಸಿದ್ದಪುರ ಗ್ರಾಮದ ಮಂಜನಾಥ ಹಂದ್ರಾಳ (28) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಖಾಸಿಂಸಾಬ್​ರ್​ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ

RELATED ARTICLES

Related Articles

TRENDING ARTICLES