Thursday, April 3, 2025

ಬಡವ ರಾಸ್ಕಲ್​ ಮದುವೆ ಶ್ರೀಮಂತವಾಗಿ ನಡೆಯುತ್ತಿದೆ: ಅರುಣ್​ ಸಾಗರ್​

ಮೈಸೂರು : ನಟ ಡಾಲಿ ಧನಂಜಯ್​ ಮದುವೆ ಅರಮನೆ ನಗರಿ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಅದ್ದೂರಿ ಮದುವೆಗೆ ನಿದೇಶಕ ಅರುಣ್​​ ಸಾಗರ್​​ ಸೆಟ್​ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದು. ಅದ್ದೂರಿಯಾದ ಎರಡು ಸೆಟ್​ಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಕುರಿತು ಅರುಣ್​ ಸಾಗರ್​ ಪವರ್ ಟಿವಿ ಜೊತೆಗೆ ಎಕ್ಷ್​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ.

ಪವರ್​ ಟಿವಿ ಜೊತೆಯಲ್ಲಿ ಮಾತನಾಡಿದ ಅರುಣ್​ ಸಾಗರ್​ ‘ ಈ ಅದ್ದೂರಿ ಸೆಟ್​ ನಿರ್ಮಾಣವನ್ನು ನಾನು ಮತ್ತು ಧೃವ ಇಬ್ಬರು ಸೇರಿಕೊಂಡು ಮಾಡಿದ್ದೇವೆ. ಈ ಸೆಟ್​ ನಿರ್ಮಾಣದಲ್ಲಿ 800ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೂ ಮಾರುವವರಿಂದ , ಕಸ ಗುಡಿಸುವವರು ಪ್ರತಿಯೊಬ್ಬರು ಇದರಿಂದ ಕೆಲಸ ಪಡೆದಿದ್ದಾರೆ. ಮದುವೆ ಎಂಬುದು ಇಂದು ಉದ್ಯಮವಾಗಿ ಪರಿವರ್ತನೆಯಾಗಿದೆ. ಈ ಮದುವೆ ಸಾವಿರಾರು ಜನರಿಗೆ ಊಟ ನೀಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ :ಮುಂದಿನ ಚುನಾವಣೆ ಗೆಲ್ಲಬೇಕಾದರೆ ಸಿದ್ದರಾಮಯ್ಯ ರಾಜಕೀಯದಲ್ಲಿರಬೇಕು: ಸತೀಶ್​ ಜಾರಕಿಹೋಳಿ

ಬಡವ ರಾಸ್ಕಲ್​ ಮದುವೆ ಶ್ರೀಮಂತವಾಗಿ ನಡೆಯುತ್ತಿದೆ !

ಧನಂಜಯ್ ಕುರಿತು ಮಾತನಾಡಿದ ಅರುಣ್​ ಸಾಗರ್​ ‘ ಧನಂಜಯ್​ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ. ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಅರುಣ್ಣಣ್ಣ ಬಡವ ರಾಸ್ಕಲ್​ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ ಎಂದ. ಬಡವನ ಕನಸು ಶ್ರೀಮಂತವಾಗುತ್ತಿದೆ. ಧನಂಜಯ್​ರನ್ನು ರಂಗಯಾಣದಿಂದ ನಾನು ನೋಡುತ್ತಿದ್ದೇನೆ, ಸಿನಿ ರಂಗದಲ್ಲಿ ಧನಂಜಯ್​ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾನೆ.

ಅವನೊಬ್ಬ ಸಹೃದಯಯದ ಯುವಕ, ಸಿನಿರಂಗದಲ್ಲಿ ಆತ ಸಾಕಷ್ಟು ಪರಿಶ್ರಮ ಪಟ್ಟು ಬೆಳೆದಿದ್ದಾನೆ. ಸಿನಿ ರಂಗಕ್ಕೆ ಬಂದ ಕೆಲ ದಿನಗಳಲ್ಲೆ ಅವನು ಪ್ರೊಡೆಕ್ಷನ್​ ನಿರ್ಮಿಸಿದ್ದಾನೆ. ಸಮಾಜಕ್ಕೆ ಏನನ್ನು ಕೊಡಬೇಕು ಎಂದು ಆತನಿಗೆ ತಿಳಿದಿದೆ. ಜೊತೆಗೆ ಆತನ ಸ್ನೇಹಿತರು ಬಳಗವು ಈಗೆ ಇದೆ. ಬಹಳ ಒಳ್ಳೆಯ ಸ್ನೇಹಿತರನ್ನು ಹೊಂದಿದ್ದಾನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES