ದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಶುರುವಾಗಿದ್ದು, ಕೇಸರಿ ಪಡೆ ಭರ್ಜರಿ ಕಮಾಲ್ ಮಾಡಿದೆ. ಆರಂಭಿಕ ಟ್ರೆಂಡ್ನಲ್ಲಿ ಬಿಜೆಪಿ ಬಹುಮತ ಬೇಕಿರುವ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು. ಆಮ್ ಆದ್ಮಿಯ ಘಟಾನುಘಟಿಗಳು ಆರಂಭಿಹ ಹಿನ್ನಡೆ ಕಾಯ್ದುಕೊಂಡಿದ್ದಾರೆ.
ಮತ ಎಣಿಕೆ ಆರಂಭದಲ್ಲೇ ಕಳೆಗಟ್ಟಿದ್ದು ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಇತ್ತ ಆಪ್ನಲ್ಲಿ ಘಟಾನುಘಟಿ ನಾಯಕರು ಹಿನ್ನಡೆ ಅನುಭವಿಸಿದ್ದರೂ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಬಿಜೆಪಿಗೆ ನೇರ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ :ಮಾಟ-ಮಂತ್ರಕ್ಕೆ ಮಗನ ಸಾ*ವು: ಸ್ವಂತ ಸಹೋದರಿಗೆ ಬಲವಂತವಾಗಿ ವಿಷ ಕುಡಿಸಿದ ಅಣ್ಣ
9:00 ಗಂಟೆಯ ವೇಳೆಗೆ ಬಿಜೆಪಿ 43 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು. ಎಎಪಿ 25, ಕಾಂಗ್ರೆಸ್ ಕೇವಲ 1 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ 1500 ಮತಗಳಿಂದ ಹಿನ್ನಡೆ ಕಾಯ್ದುಕೊಂಡಿದ್ದು. ಹಾಲಿ ಸಿಎಂ ಆತಿಶಿ ಮರ್ಲೆನಾ, ಉಪಮುಖ್ಯಮಂತ್ರಿ ಮನೋಜ್ ಸಿಸೋಡಿಯಾ ಸೇರಿದಂತೆ ಆಪ್ನ ಘಟಾನುಘಟಿಗಳು ಹಿನ್ನಡೆ ಅನುಭವಿಸಿದ್ದಾರೆ.