Friday, February 7, 2025

ದೇವಾಸ್ಥಾನದ ಕಳಸ ಸ್ಥಾಪನೆ ವೇಳೆ ದುರ್ಘಟನೆ: ಕ್ರೇನ್​ ಮೇಲಿಂದ ಬಿದ್ದು ಓರ್ವ ಸಾ*ವು

ಹಾವೇರಿ : ದೇವಾಸ್ಥಾನದ ಕಳಸ ಸ್ಥಾಪನೆ ವೇಳೆ ದುರ್ಘಟನೆಯೊಂದು ನಡೆದಿದ್ದು. ದೇವಾಲಯದ ಗೋಪುರದ ಮೇಲೆ ಕಳಸ ಸ್ಥಾಪನೆ ಮಾಡಲು ಕ್ರೇನ್​ ಮೂಲಕ ಗೋಪುರ ತುತ್ತತುದಿಗೆ ಹೋಗುವ ವೇಳೆ ಕ್ರೇನ್​ನ ಬಕೆಟ್​ ಮುರಿದು ಓರ್ವ ಸಾವನ್ನಪ್ಪಿದ್ದು. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹಾವೇರಿಯ ಶೇಷಗಿರಿ ಗ್ರಾಮದಲ್ಲಿರುವ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣದ ವೇಳೆ ಅವಘಡ ನಡೆದಿದ್ದು. ಕ್ರೇನ್​ ಮೂಲಕ ಕಳಸ ಸ್ಥಾಪನೆಗೆ ಎಂದು ದೇವಾಲಯದ ಮೇಲೆ ಏರುವಾಗ ಕ್ರೇನ್​ ಬಕೆಟ್​ ಕಟ್​ ಆಗಿ ಅಪಘಡ ಸಂಭವಿಸಿದೆ. ಕ್ರೇನ್​​ ಮೇಲಿಂದ ಬಿದ್ದು ಗ್ರಾಮದ ಮಂಜುನಾಥ ಪಾಟೀಲ (48) ಎಂಬಾತ ಮೃತ ಪಟ್ಟಿದ್ದು. ಮಂಜು ಬಡಿಗೇರ್​ ಎಂಬಾತ ಗಾಯಗೊಂಡಿದ್ದಾನೆ.

ಇದನ್ನೂ ಓದಿ :ಭೀಕರ ರಸ್ತೆ ಅಪಘಾತ: 6 ಜನ ಸಾ*ವು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಗಾಯಾಳುವನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ಆಡೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES