Tuesday, February 4, 2025

ಕಳ್ಳತನದ ಆರೋಪಿಗೆ ಜಾಮೀನು: ಗ್ರಾಮದ ಸುತ್ತ 200 ಗಿಡ ನೆಡುವಂತೆ ಸೂಚಿಸಿದ ನ್ಯಾಯಾಲಯ

ಕಟಕ್: ಕಳ್ಳತನ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಗೆ ಒರಿಸ್ಸಾ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ಕೆ ಪಾಣಿಗ್ರಾಹಿ ಅವರ ಏಕ ಸದಸ್ಯ ಪೀಠ ಜಾಮೀನು ನೀಡಿದೆ. ಆರೋಪಿಯ  ಗ್ರಾಮದ ಸುತ್ತಲೂ 200 ಸಸಿಗಳನ್ನು ನೆಟ್ಟು ಅವುಗಳನ್ನು 2 ವರ್ಷಗಳ ಕಾಲ ನಿರ್ವಹಿಸಬೇಕು ಎಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಮಾನಸಿ ಅತಿ ಒಡಿಶಾದ ಜಾರ್ಸುಗುಡ ಜಿಲ್ಲೆಯ ಕೊಲಾಬಿರಾದಲ್ಲಿ ಆರು ವಿದ್ಯುತ್ ಕಂಬಗಳನ್ನು ಕದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. 2024ರ ಡಿಸೆಂಬರ್​ 25ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ನ್ಯಾಯಮೂರ್ತಿ ಪಾಣಿಗ್ರಾಹಿ ಅವರ ಪೀಠ ವಿಚಾರಣೆ ನಡೆಸಿದ್ದು. ಜಾರ್ಸುಗುಡದ ಉಪ-ವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (SDJM) ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.

ಇದನ್ನೂ ಓದಿ :ಬಿಜೆಪಿಗೆ ಆನೆಬಲ ತುಂಬಿದ RSS: ಮತದಾನಕ್ಕೂ ಮುನ್ನ ಕೇಜ್ರಿವಾಲ್​ಗೆ ಬಿಗ್​ಶಾಕ್​

ಮಾನಸಿ ಅತಿ ಜಾಮೀನು ನೀಡುವಂತೆ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಾಣಿಗ್ರಾಹಿ ‘ ಆರೋಪಿ ತನ್ನ ಗ್ರಾಮದ ಸುತ್ತಲೂ ಸರ್ಕಾರಿ ಭೂಮಿ/ಸಮುದಾಯ ಭೂಮಿ/ಖಾಸಗಿ ಭೂಮಿಯಲ್ಲಿ ಮಾವು, ಬೇವು, ಹುಣಸೆ ಮುಂತಾದ ಸ್ಥಳೀಯ ತಳಿಗಳ 200 ಸಸಿಗಳನ್ನು ನೆಡಬೇಕು” ಎಂದು ಹೇಳಿದ್ದಾರೆ.

ಜಿಲ್ಲಾ ನರ್ಸರಿ/ಡಿಎಫ್‌ಒ ಅವರಿಗೆ ಸಸಿಗಳನ್ನು ಅತಿಗೆ ಪೂರೈಸಲು ಆದೇಶಿಸಲಾಗಿದೆ ಮತ್ತು ಕಂದಾಯ ಅಧಿಕಾರಿಗಳು ನೆಡಲು ಭೂಮಿಯನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತಾರೆ. ಸ್ಥಳೀಯ ಅರಣ್ಯ ಅಧಿಕಾರಿಯೊಂದಿಗೆ ಸಮನ್ವಯದೊಂದಿಗೆ ಸ್ಥಳೀಯ ಪೊಲೀಸ್ ಠಾಣೆ ಐಐಸಿ ಅರ್ಜಿದಾರರು ನೆಟ್ಟಿಲ್ಲದ ಸಸಿಗಳನ್ನು ನೆಟ್ಟಿದ್ದಾರೆಯೇ ಎಂದು ಮೇಲ್ವಿಚಾರಣೆ ಮಾಡುತ್ತದೆ.

RELATED ARTICLES

Related Articles

TRENDING ARTICLES