Tuesday, February 4, 2025

ಕುಂಭಮೇಳಕ್ಕೆ ಭೇಟಿ ನೀಡಲು ಯುಪಿಗೆ ಬಂದ ನೀಡಿದ ಭೂತಾನ್​ ದೊರೆ

ಭೂತಾನ್​ : ನೆರೆಯ ದೇಶ ಭೂತಾನಿನ ದೊರೆ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಕ್ಕೆ ಭೇಟಿ ನೀಡಲು ಭಾರತಕ್ಕೆ ಭೇಟಿ ನೀಡಿದ್ದು. ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂತಾನ್​ ರಾಜನನ್ನು ಯೋಗಿ ಆದಿತ್ಯನಾಥ್​ ಬರಮಾಡಿಕೊಂಡರು.

ಇಂದು ಕುಂಭಮೇಳದ ತ್ರಿವೇಣಿ ಸಂಗಮಕ್ಕೆ ಜಿಗ್ಮೇ ಖೇಸರ್​ ವಾಂಗ್ಚುಕ್​​ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದ್ದು. ಇವರನ್ನು ಯುಪಿ ಮುಖ್ಯಮಂತ್ರಿ ಆಧಿತ್ಯನಾಥ್​ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಈ ವೇಳೆ ಇಬ್ಬರು ಪರಸ್ಪರ ಕುಶಲೋಪಚಾರ ವಿಚಾರಿಸಿಕೊಂಡರು.

ಇದನ್ನೂ ಓದಿ :ಕನ್ನಡಿಗರ ಮೇಲೆ ಹೆಚ್ಚಾಯ್ತು ಹಿಂದಿ ಭಾಷಿಕರ ದಬ್ಬಾಳಿಕೆ !

ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಭೂತಾನ್​ ದೊರೆ ಪುಣ್ಯ ಸ್ನಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದ್ದು. ಭೂತಾನಿನ ದೊರೆ ಮಹಾಕುಂಭಕ್ಕೆ ಭೇಟಿ ನೀಡುತ್ತಿರುವುದು ಈ ಭವ್ಯ ಧಾರ್ಮಿಕ ಸಭೆಯ ಜಾಗತಿಕ ಆಧ್ಯಾತ್ಮಿಕ ಮಹತ್ವವನ್ನು ಸೂಚಿಸುತ್ತದೆ.

RELATED ARTICLES

Related Articles

TRENDING ARTICLES