Monday, February 3, 2025

ರಾಷ್ಟ್ರಿಯ ಪಕ್ಷಕ್ಕೆ ಸೇರಬೇಕು ಎಂಬ ಆಸೆ ಇದ್ದರೆ ಸೇರಿಕೊಳ್ಳಿ: ಜೆಡಿಎಸ್​ ಕಾರ್ಯಕರ್ತರಿಗೆ ಡಿಕೆಶಿ ಆಫರ್​

ಬೆಂಗಳೂರು : ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​ ‘ ಜೆಡಿಎಸ್​ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿಲ್ಲ. ಆದರೆ ಅವರು ನ್ಯಾಷನಲ್​ ಪಾರ್ಟಿಗೆ ಸೇರಬೇಕು ಎಂದು ಆಸೆಯಿದ್ದರೆ ಸೇರಿಕೊಳ್ಳಿ ಎಂದು ಹೇಳಿದರು.

ಕಳೆದ ಕೆಲದಿನಗಳಿಂದ ಜೆಡಿಎಸ್​ ಶಾಸಕರು ಕಾಂಗ್ರೆಸ್​ ಸೇರುತ್ತಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಇದಕ್ಕೆ ಅನೇಕ ಬಾರಿ ಕೇಂದ್ರ ಸಚಿವ ಕುಮಾರ್​ ಸ್ವಾಮಿ ಸೇರಿದಂತೆ ಅನೇಕರು ಸ್ಪಷ್ಟನೆ ನೀಡಿ ನಮ್ಮ ಶಾಸಕರು ಎಲ್ಲಿಯೂ ಹೋಗಲ್ಲ ಎಂದು ಹೇಳಿದ್ದಾರೆ. ಇದೇ ವಿಚಾರದ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​ ‘ನಾನು ಯಾರ ಜೊತೆಯೂ ಮಾತನಾಡಿಲ್ಲ,ಜೆಡಿಎಸ್ ಶಾಸಕರ ಜೊತೆಯೂ ಮಾತನಾಡಿಲ್ಲ, ಆದರೆ ಸ್ಥಳೀಯ ಮಟ್ಟದಲ್ಲಿರುವ ಜೆಡಿಎಸ್​ ಕಾರ್ಯಕರ್ತರಿಗೆ ನೋವಿದೆ.

ಇದನ್ನೂ ಓದಿ :Hassan: ಸಾಲಬಾಧೆ ತಾಳಲಾರದೆ ಆತ್ಮಹ*ತ್ಯೆ ಶರಣಾದ ರೈತ !

ಅವರು ಎಷ್ಟು ದಿನ ಅಂತ ಕಾಯುತ್ತಾರೆ. ಅವರಿಗೆ ನ್ಯಾಷನಲ್​ ಪಾರ್ಟಿಗೆ ಸೇರಬೇಕೆಂಬ ಆಸೆ ಇದೆ, ಅದಕ್ಕೆ ಬಂದು ಸೇರಿಕೊಳ್ಳಿ ಎಂದು ಹೇಳಿದ್ದೆ. ಆದರೆ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಾಲ್ಕೈದು ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬುದೆಲ್ಲ ಫೇಕ್​ ಸುದ್ದಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES