Saturday, August 23, 2025
Google search engine
HomeUncategorizedಜಾನುವಾರುಗಳನ್ನು ಕದಿಯಲು ಬಂದ ಕಳ್ಳರು : ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು !

ಜಾನುವಾರುಗಳನ್ನು ಕದಿಯಲು ಬಂದ ಕಳ್ಳರು : ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು !

ಹಾಸನ : ಜಾನುವಾರುಗಳನ್ನು ಕದಿಯಲು ಬಂದ ಕಳ್ಳರನ್ನು ಕಂಬಕ್ಕ ಕಟ್ಟಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಹಾಸನದಲ್ಲಿ ನಡೆದಿದ್ದು. ನಾಲ್ವರು ಕಳ್ಳರ ಪೈಕಿ ಮೂವರಿಗೆ ಗೂಸಾ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹಾಸನ ಜಿಲ್ಲೆ, ಹೊಳೆನರಸೀಪುರದ ಮೂಡಲಮಾಯಿಗೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ನಾಲ್ವರು ಕಳ್ಳರು ಜಾನುವಾರುಗಳನ್ನು ಕಳ್ಳತನ ಮಾಡಲು ಎಂದು ಟಾಟಾ ಎಸಿಯಲ್ಲಿ ಬಂದಿದ್ದರು. ಗ್ರಾಮದ ರಾಮು ಎಂಬುವವರ ಮನೆಗೆ ಬಂದಿದ್ದರು.

ಇದನ್ನೂ ಓದಿ :ಅತ್ಯಾಚಾರಿ ಗುರ್ಮೀತ್​ ರಾಮ್​ ರಹೀಮ್​ ಸಿಂಗ್​ಗೆ ಮತ್ತೆ ಪೆರೋಲ್​ ಭಾಗ್ಯ !

ಈ ವೇಳೆ ನಾಲ್ವರು ಕಳ್ಳರ ಪೈಕಿ ಮೂವರನ್ನು ವಶಕ್ಕೆ ಪಡೆದಿರುವ ಗ್ರಾಮಸ್ಥರು, ಮೂವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಓರ್ವ ಕಳ್ಳ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments