Tuesday, February 11, 2025

ಕೈ ಕೊಟ್ಟ ಬ್ಯೂಟಿಪಾರ್ಲರ್​ ಉದ್ಯಮ : ಕಾರಿನ ಸಮೇತ ನದಿಗೆ ಬಿದ್ದು ವ್ಯಕ್ತಿ ಸಾ*ವು !

ಚಿಕ್ಕೋಡಿ : ಉದ್ಯಮದಲ್ಲಿ ನಷ್ಟವಾದ ಹಿನ್ನಲೆಯಲ್ಲಿ ಉದ್ಯಮಿಯೊಬ್ಬ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಸಿಕೊಂಡಿದ್ದು. ಮೃತ ದುರ್ದೈವಿಯನ್ನು ಕಿರಣ್​ ಲಕ್ಷ್ಮಣ್​ ನಾವಲಗಿ ಎಂದು ಗುರುತಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ದಡ್ಡಿ ಗ್ರಾಮದ ಕಿರಣ ಲಕ್ಷ್ಮಣ ನಾವಲಗಿ ಎಂಬಾತ ಸಾವನ್ನಪ್ಪಿದ್ದಾನೆ. ಕಿರಣ್​ ಕಳೆದ ಕೆಲ ತಿಂಗಳಿಂದ ಬ್ಯೂಟಿ ಪಾರ್ಲರ್​ ಉದ್ಯಮ ನಡೆಸುತ್ತಿದ್ದ. ಆದರೆ ಉದ್ಯಮದಲ್ಲಿ ನಷ್ಟ ಉಂಟಾದ ಕಾರಣದಿಂದ ಕಿರಣ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಕಳೆದ ಡಿಸೆಂಬರ್​ 30ರಂದು ಮನೆಯಲ್ಲಿ ಯಾರಿಗೂ ಹೇಳದೆ ಕಾರು ತೆಗೆದುಕೊಂಡು ಹೋಗಿದ್ದನು. ಈ ವೇಳೆ ಹುಕ್ಕೇರಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಬಳಿಯ ಘಟಪ್ರಭಾ ನದಿಗೆ ಕಾರಿನ ಸಮೇತ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ

 

RELATED ARTICLES

Related Articles

TRENDING ARTICLES