Monday, February 24, 2025

ಹನಿಟ್ರ್ಯಾಪ್​ ಪ್ರಕರಣ : ಯುವತಿ ಹಿಂದೆ ಬಿದ್ದು ಮೈಮೇಲಿನ ಬಟ್ಟೆಯನ್ನು ಕಳೆದುಕೊಂಡ ಅಂಕಲ್​ !

ಆರೋಪಿಗಳಾದ ನಯನಾ, ಜಯರಾಜು, ಸಂತೋಷ

ಬೆಂಗಳೂರು : ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಹನಿಟ್ರ್ಯಾಪ್​ ಜಾಲವನ್ನು ಭೇದಿಸಿದ್ದು. ಹನಿಟ್ರ್ಯಾಪ್​ಗೆ ಒಳಗಾದ ಕಂಟ್ರ್ಯಾಕ್ಟರ್​ ಓರ್ವ ಚಿನ್ನ, ಹಣ ಸೇರಿದಂತೆ ತನ್ನ ಮೈಮೇಲಿನ ಬಟ್ಟೆಯನ್ನು ಕಳೆದುಕೊಂಡಿದ್ದಾನೆ.

21ರ ಯುವತಿ ಸಿಕ್ಳು ಎಂದು ನಂಬಿ 57 ವರ್ಷದ ಅಂಕಲ್​ ಒಬ್ಬ ಹನಿಟ್ರ್ಯಾಪ್​ಗೆ ಒಳಗಾಗಿದ್ದಾನೆ. ಸಿವಿಲ್​ ಕಾಂಟ್ರಕ್ಟರ್​ ಆಗಿದ್ದ ಅಂಕಲ್​ಗೆ ಸ್ನೇಹಿತನೊಬ್ಬನ ಮೂಲಕ ನಯನಾ ಎಂಬ ಯುವತಿ ಪರಿಚಯವಾಗಿದ್ದಳು. ಪರಿಚಯವಾದ ಮೇಲೆ ಪ್ರತಿದಿನ ಕರೆ ಮಾಡಿ ಅಂಕಲ್​ ಜೊತೆಗೆ ನಯನಾ ಮಾತನಾಡುತ್ತಿದ್ದಳು. ಡಿಸೆಂಬರ್ 09ರಂದು ಯುವತಿ ಟೀ ಕುಡಿಯಲು ಅಂಕಲ್​ನ್ನು ಮನೆಗೆ ಕರೆದಿದ್ದಳು.

ಇದನ್ನೂ ಓದಿ : ಮನಮೋಹನ್ ಸಿಂಗ್ ನಿಧನ ಹಿನ್ನಲೆ : ಹೊಸವರ್ಷಾಚರಣೆ ಕಾರ್ಯಕ್ರಮ ರದ್ದು !

ಯುವತಿಯ ಕರೆಗೆ ಓಗೊಟ್ಟ ಅಂಕಲ್​ ಯುವತಿಯ ಮನೆಗೆ ಹೋಗಿದ್ದನು. ಈ ವೇಳೆ ಪೂರ್ವ ನಿಯೋಜಿತಾ ಯೋಜನೆಯಂತೆ ನಕಲಿ ಪೊಲೀಸ್​ ವೇಶದಲ್ಲಿ ಈ ಗ್ಯಾಂಗ್​ ಮನೆಗೆ ಎಂಟ್ರಿ ಕೊಟ್ಟಿದೆ. ಪೊಲೀಸ್​ ವೇಶದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು ವ್ಯಭಿಚಾರ ನಡೆಸುತ್ತಿದ್ದಿರಾ, ನಿಮ್ಮನ್ನು ಅರೆಸ್ಟ್​ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಈ ವೇಳೆ ಅಂಕಲ್​ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಬಟ್ಟೆಯನ್ನು ಬಿಚ್ಚಿಸಿ ನಗ್ನ ಪೋಟೋ ತೆಗೆದುಕೊಂಡಿದ್ದರು. ನಂತರ ಸ್ಟೇಶನ್​ಗೆ ಹೋಗೋದು ಬೇಡ ಎಂದರೆ ಇಲ್ಲೆ ಸೆಟಲ್​ ಮಾಡ್ಕೋ ಎಂದಿದ್ದ ಆರೋಪಿಗಳು. ಅಂಕಲ್​ ಬಳಿಯಲ್ಲಿ 29 ಸಾವಿರ ನಗದು, 26 ಸಾವಿರ ಹಣವನ್ನು ಪೋನ್​ ಪೇನಲ್ಲಿ ಕಳಿಸಿಕೊಂಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು 5 ಲಕ್ಷ ಮೌಲ್ಯದ ಚಿನ್ನವನ್ನು ಪಡೆದಿದು ಎಸ್ಕೇಪ್​ ಆಗಿದ್ದರು.

ಇದನ್ನೂ ಓದಿ : ವಾಯುಭಾರ ಕುಸಿತ : ಮುಂದಿನ ಐದು ದಿನ ಸಿಲಿಕಾನ್​ ಸಿಟಿಗೆ ಮಳೆ ಸಾಧ್ಯತೆ !

ನಂತರ ಅಂಕಲ್​ ಯುವತಿಗೆ ಇವರ ವಿರುದ್ದ ದೂರು ಕೊಡೋಣ ಎಂದು ಹೇಳಿದ್ದನು. ಆದರೆ ಈ ವೇಳೆ ತಪ್ಪಿಸಿಕೊಳ್ಳಲು ಹೊಸ ವರಸೆ ತೆಗೆದಿದ್ದ ಯುವತಿ. ಸ್ಟೇಷನ್​ಗೆ ಕಂಪ್ಲೇಟ್​ ಕೊಟ್ಟರೆ, ಮಗು ಕರೆದುಕೊಂಡು ನಿಮ್ಮ ಮನೆಗೆ ಬರುತ್ತೇನೆ ಎಂದು ಬ್ಲಾಕ್​ ಮೇಲ್​ ಮಾಡಿದ್ದಳು. ಇದರಿಂದ ಹೆದರಿದ್ದ ಅಂಕಲ್​ ಕಂಪ್ಲೇಟ್​ ಕೊಡದೆ ಸುಮ್ಮನಿದ್ದನು

ನಂತರ ತಾನೇ ಧೈರ್ಯಮಾಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ಥ ಅಂಕಲ್​ ದೂರು ನೀಡಿದ್ದು. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಸಂತೋಶ್​, ಅಜಯ್​, ಜಯರಾಜ್​ ಎಂಬುವವರನ್ನು ಬಂಧಿಸಿದ್ದಾರೆ. ಇನ್ನು ಯುವತಿ ನಯನಾ ತಲೆ ಮರಿಸಿಕೊಂಡಿದ್ದು. ಆಕೆಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES