Monday, May 6, 2024

ಬಿಜೆಪಿಯವರು ವಚನ ಭ್ರಷ್ಟರು, ಸುಳ್ಳಿನ ಸರದಾರರು : ಈಶ್ವರ್ ಖಂಡ್ರೆ

ಬೀದರ್ : ಬಿಜೆಪಿಯವರು ವಚನ ಭ್ರಷ್ಟರು, ಸುಳ್ಳಿನ ಸರದಾರರು ಎಂದು ಬಿಜೆಪಿ ವಿರುದ್ಧ ಸಚಿವ ಈಶ್ವರ್​ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ಅಭ್ಯರ್ಥಿ ಸಾಗರ್ ಖಂಡ್ರೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ‌ ನಮ್ಮ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಎಲ್ಲರೂ ಸಂತಸವಾಗಿದ್ದಾರೆ ಎಂದು ಹೇಳಿದ್ದಾರೆ.

ನಾವು ನೀಡಿದ್ದ ಐದು ಗ್ಯಾರಂಟಿಗಳನ್ನ ಜಾರಿ ಮಾಡಿದ್ದೇವೆ. ಈ ಚುನಾವಣೆಯಲ್ಲಿ 25 ಗ್ಯಾರಂಟಿಗಳನ್ನು ನೀಡುವುದಾಗಿ ಘೋಷಿಸಿದ್ದೇವೆ. ಕೇಂದ್ರದಲ್ಲಿ‌ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ 1 ಲಕ್ಷ ನೀಡುತ್ತೇವೆ ಅಂದಿದ್ದೇವೆ. ನಾವೂ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಮಾಂಗಲ್ಯ ಕಿತ್ತುಕೊಳ್ತಾರೆ ಅಂತಾರೆ

ಬಿಜೆಪಿ ನಾಯಕರು ಸೋಲಿನ ಭೀತಿಯಲ್ಲಿ ಕೀಳು ಮಟ್ಟದ ಹೇಳಿಕೆಗಳನ್ನು ನೀಡ್ತಾ ಇದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾಂಗಲ್ಯ ಕಿತ್ತುಕೊಳ್ತಾರೆ ಅಂತಾರೆ. ಜಾತಿ ಜಾತಿಗಳನ್ನ ಒಡೆದಾಳುವ ನೀತಿಯನ್ನ ಬಿಜೆಪಿ ಅನುಸರಿಸುತ್ತದೆ. ಇದು ದೇಶದ ಭವಿಷ್ಯವನ್ನ ರೂಪಿಸುವ ಚುನಾವಣೆ. ಯಾರಿಗೆ ಮತ ಹಾಕಬೇಕು ಅನ್ನೋದನ್ನ ನೀವು ಅರಿತುಕೊಳ್ಳಬೇಕು. ಕಾಂಗ್ರೆಸ್‌ ಅಭ್ಯರ್ಥಿಗೆ ನಿಮ್ಮ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಭರವಸೆಗಳು ಸುಳ್ಳು ಪೊಳ್ಳು

ಬಿಜೆಪಿ 10 ವರ್ಷಗಳಿಂದ ಅಧಿಕಾರ ಮಾಡ್ತಾ ಇದೆ. ಬಿಜೆಪಿ ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿಯ ಎಲ್ಲಾ ಭರವಸೆಗಳು ಸುಳ್ಳು ಪೊಳ್ಳು ಭರವಸೆಗಳೇ. 15 ಲಕ್ಷ ನೀಡ್ತಿವಿ ಅಂದಿದ್ರು. ರೈತರ ಆದಾಯ ದುಪ್ಪಟ್ಟು ಮಾಡ್ತಿವಿ ಅಂದಿದ್ರು. ಅಚ್ಚೇ ದಿನ್ ಆಯೇಗಾ ಅಂದ್ರು, ಅಚ್ಚೇ ದಿನ ಬಂತ. ಪೆಟ್ರೋಲ್, ಡಿಸೇಲ್, ದಿನಿನಿತ್ಯ ಪದಾರ್ಥಗಳ ಬೆಲೆ ದುಪ್ಪಟ್ಟಾಯ್ತು. ಇದೂ ಅಚ್ಚೇ ದಿನ್? ಎಂದು ಸಚಿವ ಈಶ್ವರ್​ ಖಂಡ್ರೆ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES