ರಾಮನಗರ : ಫಾರ್ಮ್ಹೌಸ್ಗೆ ನುಗ್ಗಿದ ದುಷ್ಕರ್ಮಿಗಳು ಒಂಟಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಗ್ಗಲಿಪುತ ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿ ನಡೆದಿದೆ.
ಶಾಂತಿ (53), ಮೃತ ಮಹಿಳೆ, ಶುಕ್ರವಾರ ರಾತ್ರಿ ಫಾರ್ಮ್ಹೌಸ್ಗೆ ನುಗ್ಗಿದ ದುಷ್ಕರ್ಮಿಗಳು ಶಾಂತಿಯನ್ನು ಕೊಲೆ ಮಾಡಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಚುನಾವಣಾ ಚೆಕ್ ಪೋಸ್ಟ್ಗೆ ಲಾರಿ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಪಾರು
ಕಳೆದ ಹತ್ತು ತಿಂಗಳ ಹಿಂದೆ ಶಾಂತಿ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಐದು ವರ್ಷಗಳ ಹಿಂದೆ ಇದ್ದೊಬ್ಬ ಮಗ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದರು ಇಬ್ಬರ ಅಗಲಿಕೆಯಿಂದ ಒಬ್ಬೊಂಟಿಯಾಗಿ ಫಾರ್ಮ್ ಹೌಸ್ನಲ್ಲಿ ಶಾಂತಿ ವಾಸವಾಗಿದ್ದರು.
ಸ್ಥಳಕ್ಕೆ ಕಗ್ಗಲಿಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾರು ಚಾಲಕನಿಂದಲೇ ದರೋಡೆ ಮಾಡಿ ಹತ್ಯೆ ಮಾಡಿರೋ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.