ಆನೇಕಲ್: ನೀಲಗಿರಿ ತೋಪಿನಲ್ಲಿ ಸುಟ್ಟ ರೀತಿಯಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿರುವ ಘಟನೆ ಆನೇಕಲ್ನ ಕಾಳನಾಯಕನಹಳ್ಳಿ ಬಳಿ ನಡೆದಿದೆ.
ಹರ್ಷಿತ್ ಕೊಂಟಾಳ ಮೃತ ದುರ್ವೈವಿ ಎಂದು ಗುರುತಿಸಲಾಗಿದೆ. ಈತ ಆನೇಕಲ್ನ ಅಲಯೆನ್ಸ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದು, ಉತ್ತರಾಖಂಡ ರಾಜ್ಯದ ಹಾಲ್ಧ್ವನಿ ಎಂಬಲ್ಲಿನ ನಿವಾಸಿ ಎಂದು ಮಾಹಿತಿ ತಿಳಿದು ಬಂದಿದೆ.
ಹಾಸ್ಟೆಲ್ನಿಂದ ನಾಪತ್ತೆಯಾದವ ಶವವಾಗಿ ಪತ್ತೆ
ಹರ್ಷಿತ್ ಕೊಂಟಾಳ ಫೆಬ್ರುವರಿ 22 ರಂದು ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಇಂದು ಬೆಳಗ್ಗೆ ಕಾಳನಾಯಕನಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಹಾಕಿರುವಂತೆ ಶವ ಸಿಕ್ಕಿದೆ. ಮೃತದೇಹದ ಪಕ್ಕ ಕಾಲೇಜು ಬ್ಯಾಗ್, ಮೊಬೈಲ್ ದೊರೆತಿದೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿ ಹಾಸ್ಟೆಲ್ ಹೊರಗಡೆ ಕಾಣಿಸಿಕೊಂಡ ಕೊನೆಯ ವಿಡಿಯೋ ಲಭ್ಯವಾಗಿತ್ತು. ಈ ವಿಡಿಯೋ ಜೊತೆಗೆ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.