Friday, May 3, 2024

ಡಿಕೆಶಿ ಜೈಲಿಗೆ ಹಾಕಿದ್ರೆ ಸಾಕು ಎಂದು ಸಿಬಿಐಗೆ ವಹಿಸಿದ್ದರು : ಸಚಿವ ನಾಗೇಂದ್ರ

ಬಳ್ಳಾರಿ : ಡಿಸಿಎಂ ಡಿ.ಕೆ. ಶಿವಕುಮಾರ್​ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು CBIಗೆ ವಹಿಸುವ ಮುನ್ನ ಸ್ಪೀಕರ್​​ ಅವರ ಪರ್ಮಿಷನ್​​​ ತೆಗೆದುಕೊಂಡಿಲ್ಲ ಎಂದು ಸಚಿವ ನಾಗೇಂದ್ರ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯನ್ನು ಜೈಲಿಗೆ ಹಾಕಿದ್ರೆ ಸಾಕು ಎಂದು ತರಾತುರಿಯಲ್ಲಿ ಸಿಬಿಐಗೆ ವಹಿಸಿದ್ರು. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್​​ ವಿರುದ್ಧ ಆಗಿರುವುದೆಲ್ಲಾ ರಾಜಕೀಯ ಪ್ರೇರಿತ. ನಮ್ಮ ಪ್ರಕರಣಗಳು ಇವತ್ತೋ ನಾಳೆಯೋ ಇತ್ಯರ್ಥವಾಗುತ್ತೆ. ಡಿಕೆಶಿ ತಪ್ಪಿತಸ್ಥರಲ್ಲ, ಖಂಡಿತ ಅವರು ಈ ಕೇಸ್​ನಿಂದ ಹೊರಗೆ ಬರ್ತಾರೆ ಎಂದು ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನು ರಿಯಾಕ್ಷನ್ ಕೊಡಲ್ಲ

ಡಿ.ಕೆ. ಶಿವಕುಮಾರ್​ ವಿರುದ್ಧದ​ ಪ್ರಕರಣ ಕೋರ್ಟ್​ನಲ್ಲಿದೆ. ಹೈಕೋರ್ಟ್​ಗೆ ಬಿಟ್ಟ ವಿಚಾರವನ್ನು ನಾವು ಹೇಳೋದು ಸರಿಯಲ್ಲ ಎಂದು ಸಚಿವ ಸತೀಶ್​​ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ಬಗ್ಗೆ ಮಾತನಾಡಿದ್ರು. ಜಾತಿ ಗಣತಿ ವರದಿ ಬಿಡುಗಡೆಯಾಗಲಿ. ಬಿಡುಗಡೆ ಆದ ಮೇಲೆ ಚರ್ಚೆ ಮಾಡಬಹುದು. ಬಿಡುಗಡೆಯಾಗದೇ ಬೇರೆ ಬೇರೆ ರೀತಿ ಹೇಳುವುದಲ್ಲ. ಬಿಡುಗಡೆ ನಂತರ ಸಾಧಕ-ಬಾಧಕ ಚರ್ಚೆ ಮಾಡಬಹುದು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES