Friday, September 20, 2024

ನಟ ಪವನ್​ ಕಲ್ಯಾಣ್​ ಅರೆಸ್ಟ್​!

ಆಂಧ್ರಪ್ರದೇಶ: ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್​ ಕಲ್ಯಾಣ್ ರನ್ನು ಶನಿವಾರ ರಾತ್ರಿ ಜಗ್ಗಯ್ಯ ಪೇಟ ಪೊಲೀಸರು ಬಂಧಿಸಿದ್ದಾರೆ.

ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಶನಿವಾರ ಮುಂಜಾನೆ ನಂದ್ಯಾಲ್ ಸಿಐಡಿ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಚಂದ್ರಬಾಬು ನಾಯ್ಡ ಅವರಿಗೆ ಭೇಟಿಯಾಗಲು ವಿಜಯವಾಡಕ್ಕೆ ಹೋಗುತ್ತಿ ವೇಳೆ ಆಂಧ್ರ ಮತ್ತು ತೆಲಂಗಾಣ ಗಡಿಭಾಗದ ಅನುಮಂಚಿಪಲ್ಲಿ ಬಳಿ ಜಗ್ಗಯ್ಯಪೇಟ್​ ಪೊಲೀಸರು ನಟ ಪವನ್​ ಕಲ್ಯಾಣ್​ ರನ್ನು ಬಂಧಿಸಿದ್ದಾರೆ.

ತಮ್ಮನ್ನು ಬಂಧಿಸಲು ಬಂದ ಪೊಲೀಸರಿಗೆ ನಟ ಪವನ್​ ಕಲ್ಯಾಣ್​ ತೀವ್ರ ಆಕ್ಷೇಪ ವ್ಯಕಪಡಿಸಿದ್ದಾರೆ. ಆಂಧ್ರ ಪ್ರದೇಶಕ್ಕೆ ಹೋಗಲು ಪಾಸ್​ಪೋರ್ಟ್​, ವೀಸಾ ಬೇಕಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ತಮ್ಮ ಕಾನ್ವಾಯ್​ಯನ್ನು ಮುಂದೆ ಹೋಗಲು ಬಿಡದ ಹಿನ್ನೆಲೆ ಕಾರ್​ ನಿಂದ ಕೆಳಗಿಳಿದು ಸಾಗಲು ಮುಂದಾಗಿದ್ದಾರೆ. ಈ ವೇಳೆ ಮತ್ತೆ ತಡೆಯಲು ಮುಂದಾದ ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ನಟ ಪವನ್ ಕಲ್ಯಾಣ್​ ನಡು ರಸ್ತೆಯಲ್ಲೇ ಮಲಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ಧಾರೆ.

ಪವನ್​ ಕಲ್ಯಾಣ್ ರನ್ನು ಬಂಧಿಸುತ್ತಿದ್ದಂತೆ ಜಗ್ಗಯ್ಯಪೇಟ ಬಳಿ ಪವನ್​ ಅಭಿಮಾನಿಗಳು ಮತ್ತು ಜನಸೇನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪವನ್​ಗೆ ಬೆಂಬಲ ಸೂಚಿಸಿದರು.

RELATED ARTICLES

Related Articles

TRENDING ARTICLES