Saturday, July 27, 2024

ಕುಣಿಗಲ್​ ಶಾಸಕ ರಂಗನಾಥ್​ ವಿರುದ್ದ ಶಾಸಕ ಎಂ.ಟಿ ಕೃಷ್ಣಪ್ಪ ಏಕವಚನದಲ್ಲಿ ವಾಗ್ದಾಳಿ!

ತುಮಕೂರು : ತುರುವೇಕೆರೆಗೆ ಮಂಜೂರಾಗಿದ್ದ ಮನೆಗಳನ್ನು ಕುಣಿಗಲ್​ ಗೆ ವರ್ಗಾಯಿಸಿಕೊಂಡ ಕುಣಿಗಲ್​ ಶಾಸಕ ರಂಗನಾಥ್ ವಿರುದ್ದ ಎಂ.ಟಿ ಕೃಷ್ಣಪ್ಪ​ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಘಟನೆ ನಡೆದಿದೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಕುಣಿಗಲ್​ ಶಾಸಕ ರಂಗನಾಥ್​ ವಿರುದ್ದ ವಾಗ್ದಾಳಿ ನಡೆಸಿದ ಅವರು, ತುರುವೇಕೆರೆ ಕರ್ನಾಟಕ ಒಳಗಡೆ ಇಲ್ವಾ? ಅವನ್ಯಾರಿ ಎಂಎಲ್ ಎ ತಾಕತ್ತಿಲ್ವ ಅವನಿಗೆ. ತಾಕತ್ತಿಲ್ವ ಅವನಿಗೆ, ಆಡಳಿತ ಪಕ್ಷದಲ್ಲಿದ್ದು ಮನೆ ತರೋ ಯೋಗ್ಯತೆ ಇಲ್ವಾ. ನಮ್ಮ ಮನೆಗಳನ್ನಾ ಕುಣಿಗಲ್ ಗೆ ಟ್ರಾನ್ಸಫರ್ ಮಾಡಿಸಿದ್ದಾನೆ.

ಇದನ್ನೂ ಓದಿ: ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಆದಿಚುಂಚನಗಿರಿ ಶ್ರೀಗಳು!

ಮಾಜಿ ಶಾಸಕ ಮಸಾಲೆ ಜಯರಾಂ ಅವಧಿಯಲ್ಲಿ ತುರುವೇಕೆರೆಗೆ ಮಂಜೂರಾಗಿದ್ದ 3325 ಮನೆಗಳನ್ನು ಈಗ ನಾನು ಶಾಸಕನಾದ ಮೇಲೆ ಈಗಾಗಲೇ ಮಂಜೂರಾಗಿರುವ ಎಲ್ಲಾ ಮನೆಗಳನ್ನು ಕುಣಿಗಲ್​ಗೆ ವರ್ಗಾಯಿಸಿಕೊಂಡಿರುವುದು ಸರಿಯಲ್ಲ, ಇದನ್ನು ಖಂಡಿಸಿ ಇದೇ ಸೆಪ್ಟೆಂಬರ್​ 1 ರಂದು ಮನೆ ವಾಪಾಸ್ ಕೊಡುವಂತೆ ಒತ್ತಾಯಿಸಿ ವಸತಿ ಸಚಿವರ ಕಚೇರಿ ಮುಂದೆ ಧರಣಿ ಕೂರುವ ಎಚ್ಚರಿಕೆಯನ್ನು ನೀಡಿದ್ದಾರೆ.

ಅವರದ್ದೇ ಸರ್ಕಾರ ಇರುವಾಗ ಅವರಿಗೆ ಎಷ್ಟಾದ್ರು ಮನೆಗಳನ್ನು ಕೊಡಲಿ, ನಮ್ಮ ಕ್ಷೇತ್ರಕ್ಕೆ ಮಂಜೂರಾಗಿರುವ ನಮ್ಮ ಮನೆಗಳನ್ನ ನಮಗೆ  ಕೊಡಿ ಎಂದು ಪ್ರತಿಭಟನೆ ಕೂರಲಾಗುವುದು ಈ ಧರಣಿಗೆ ತುರುವೇಕೆರೆ ಜನತೆ ಸಹ ನನ್ನ ಜೊತೆ ಬನ್ನಿ ಎಂದು ಇದೇ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿಕೊಂಡರು.

RELATED ARTICLES

Related Articles

TRENDING ARTICLES