Wednesday, June 26, 2024

ಉದ್ಯಾನ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ ಅವಘಡ : 3ನೇ ಫ್ಲಾಟ್​ಫಾರಂ ರೈಲುಗಳ ಮಾರ್ಗ ಬದಲಾವಣೆ!

ಬೆಂಗಳೂರು:  ಮೆಜೆಸ್ಟಿಕ್​​ ರೈಲ್ವೆ ನಿಲ್ದಾಣದಲ್ಲಿಉದ್ಯಾನ್​ ಎಕ್ಸ್​ಪ್ರೆಸ್​ ಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿ 3ನೇ ಪ್ಲಾಟ್​​ಫಾರಂನಲ್ಲಿನ ಬೋಗಿ ತೆರವು ಕಾರ್ಯನಡೆಯುತ್ತಿದ್ದು ಪ್ಲಾಟ್​​ಫಾರಂ ಬಂದ್ ಮಾಡಲಾಗಿದೆ.​​

ಉದ್ಯಾನ್​ ಎಕ್ಸ್​ಪ್ರೆಸ್​ ರೈಲಿಗೆ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿರೋ ಶಂಕೆ ವ್ಯಕ್ತವಾಗಿದ್ದು, ಶ್ವಾನದಳ ಮೂಲಕ ಪೊಲೀಸ್​ ಇಲಾಖೆ ತಪಾಸಣೆ ನಡೆಸಿದೆ, 3ನೇ ಪ್ಲಾಟ್​​ಫಾರಂಗೆ ಬರಬೇಕಿದ್ದ ಎಲ್ಲಾ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು ಮೂರು ಬೋಗಿಗಳನ್ನು ಗ್ಯಾರೇಜ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್​​ ರೈಲು ನಿಲ್ದಾಣದಲ್ಲಿ ಬೆಂಕಿ!

ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಉದ್ಯಾನ್ ಎಕ್ಸ್​ಪ್ರೆಸ್​​ ರೈಲಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಇಂಜಿನ್​ ಸೇರಿದಂತೆ B1, B2 ಎರಡು ಬೋಗಿಗಳಿಗೆ ಹಾನಿಯಾಗಿದೆ. ಈ ಅವಘಡದಲ್ಲಿ ಯಾವುದೇ ಪ್ರಯಾಣಿಕರಿಗೆ ಪ್ರಾಣಾಪಾಯವಾಗಿಲ್ಲ.

RELATED ARTICLES

Related Articles

TRENDING ARTICLES