Saturday, September 28, 2024

ಆನೆ ದಂತ ಮಾರಾಟ ಯತ್ನ ; ಆರೋಪಿ ಬಂಧನ

ಬೆಂಗಳೂರು : ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ ಖಾಕಿ ಪಡೆ ಘಟನೆ ಆರ್. ಎಂ. ಸಿ ಯಾರ್ಡ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕೈಗಾರಿಕ ಪ್ರದೇಶದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ್ದ ಕದೀಮರು. ನಿನ್ನೆ ಸಂಜೆ 6.30ರ ಸುಮಾರಿಗೆ ಆರ್. ಎಂ. ಸಿ ಯಾರ್ಡ್ ಠಾಣೆ​ ಪೋಲಿಸರಿಗೆ ಮಾಹಿತಿ ಸಿಕ್ಕಿದ್ದು, ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಶ್ರೀಶೈಲ ಬಂಧಿತ ಆರೋಪಿ. ಎಂಬಾತನ ಬಂಧಿಸಿದ ಪೋಲಿಸರು.

ಇದನ್ನು ಓದಿ : ಕೆಂಪಣ್ಣ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ ಮಾಜಿ ಸಚಿವ ಗೋಪಾಲಯ್ಯ

ಬಳಿಕ ಬಂಧಿತ ಆರೋಪಿಯಿಂದ 7.42 ಕೆಜಿ ತೂಕದ 5 ಆನೆ ದಂತಗಳನ್ನು ವಶಕ್ಕೆ ಪಡೆದ ಆರ್. ಎಂ. ಸಿ ಯಾರ್ಡ್​ ಪೋಲಿಸರು. ಪೋಲಿಸರ ಕಾರ್ಯಚರಣೆಯಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿರುವ ಖಾಕಿ ಪಡೆ.

ಈ ಹಿನ್ನೆಲೆ ಆರ್.ಎಂ.ಸಿ ಯಾರ್ಡ್​ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES