Friday, September 20, 2024

ರಾಜ್ಯದಲ್ಲಿನ 108 ಆ್ಯಂಬುಲೆನ್ಸ್​ ಗಳ ಕಿರಿಕ್ ಗೆ ಬ್ರೇಕ್ : ತಜ್ಞರು ಸಮಿತಿ ರಚನೆಗೆ ಮುಂದಾದ ಸರ್ಕಾರ!

ಬೆಂಗಳೂರು : ರಾಜ್ಯದಲ್ಲಿ ಆರೋಗ್ಯ ಸಮಸ್ಯೆ ಸುಧಾರಿಸಲು ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ 108 ಆರೋಗ್ಯ ಕವಚ ಹಾಗೂ 104 ಆರೋಗ್ಯ ಸಹಾಯವಾಣಿ ಯೋಜನೆಗಳ ಉನ್ನತ್ತೀಕರಣ ಹಾಗು ಮಾರ್ಗದರ್ಶನಕ್ಕೆ ತಾಂತ್ರಿಕ ಸಮಿತಿ ರಚನೆಗೆ ಮುಂದಾಗಿದೆ.

ಇದನ್ನೂ ಓದಿ: ರೈತರಿಗೆ ಹೆಣ್ಣು ಕೊಡದ ಪೋಷಕರು: ಕನ್ಯಾಭಾಗ್ಯ ಯೋಜನೆ ಜಾರಿಗೆ ಆಗ್ರಹಸಿ ಸಿಎಂಗೆ ಪತ್ರ ಬರೆದ ಯುವಕರು

ಡಾ. ಜಿ ಗುರುರಾಜ್, ನಿಮ್ಹಾನ್ಸ್ನ ಪ್ರಭಾರ ನಿರ್ದೇಶಕರು ಹಾಗೂ ಐಐಐಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದ್ದು, ಈ ಮೂಲಕ ಆರೋಗ್ಯ ಸೇವೆಗಳ ಟೆಂಡರ್ ನ್ಯೂನತೆ ಲೋಪದೋಷ ಅಧ್ಯಯನ ಹಾಗೂ ಸಲಹೆನೀಡಲು ತಜ್ಞರ ಸಲಹಾ ಸಮಿತಿ ರಚನೆ ಮಾಡಲಾಗಿದೆ ಇದರೋಂದಿಗೆ GVK ಸಂಸ್ಥೆಯ ವಿರುದ್ಧ ಸಾಲು ಸಾಲು ಆರೋಪ ಹಾಗೂ ದೂರುಗಳು ಬಂದ ಹಿನ್ನಲೆ ರಾಜ್ಯ ಸರ್ಕಾರ ಜಿವಿಕೆ ಟೆಂಡರ್​ ನಿಲ್ಲಿಸಿ GVK ಆಂಬುಲೆನ್ಸ್ ಸೇವೆಗೆ ದೊಡ್ಡ ಶಾಕ್ ಕೊಟ್ಟಂತಾಗಿದೆ.

ಈ ಸಮಿತಿಯಲ್ಲಿರುವ ತಜ್ಞರು ?

ಐಐಐಟಿ ನಿರ್ದೇಶಕರು, ನಿಮ್ಹಾನ್ಸ್ ನಿರ್ದೇಶಕರು,  ವಿಟಿಯು ಮಾಜಿ ಕುಲಪತಿಗಳು, ಕಾರ್ಮಿಕ ಇಲಾಖೆಯ ಆಯುಕ್ತರು,  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ( IISC ) ತಜ್ಞರನ್ನ ಈ ಸಮಿತಿಯೊಳಗೊಂಡಿದೆ. ಈ ಸಮಿತಿಯೂ ಟೆಂಡರ್ ಹಾಗೂ ಸೇವಾದಾರರ ಆಯ್ಕೆ ಸಂಬಂಧ ಸಲಹೆ ಮಾರ್ಗದರ್ಶನವನ್ನ ನೀಡಲಿದೆ.

RELATED ARTICLES

Related Articles

TRENDING ARTICLES