Sunday, August 24, 2025
Google search engine
HomeUncategorizedಇಂದಿನಿಂದ ಎರಡು ದಿನ ಮೋದಿ ವಿರುದ್ದದ ರಾಜಕೀಯ ಶಕ್ತಿ ಪ್ರದರ್ಶನ ಸಭೆ

ಇಂದಿನಿಂದ ಎರಡು ದಿನ ಮೋದಿ ವಿರುದ್ದದ ರಾಜಕೀಯ ಶಕ್ತಿ ಪ್ರದರ್ಶನ ಸಭೆ

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಪರ್ಯಾಯ ರಾಜಕೀಯ ಶಕ್ತಿಯನ್ನು ಸದೃಢಗೊಳಿಸುವ ಉದ್ದೇಶದ ಮಹಾ ಮೈತ್ರಿಕೂಟದ ಸಭೆಯನ್ನು ಇಂದಿನಿಂದ ಎರಡು ದಿನ ಬೆಂಗಳೂರಿನಲ್ಲಿ ನಡೆಯಲಿದೆ. ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಬಣದ ಪ್ರಮುಖರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿ ಬಸ್​ ಪಾಸ್​ ಮಾನ್ಯತೆ ವಿಸ್ತರಣೆ!

ನಗರದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಮಹಾಘಟಬಂಧನದ ಸಭೆ ನಡೆಯಲಿದ್ದು, ಸರ್ವ ಸಿದ್ಧತೆ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷವೇ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಮಹಾಘಟಬಂಧನ್​ ಸಭೆಗೆ ಸುಮಾರು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದು, ಈ ಪೈಕಿ ಬಹುತೇಕರು ಸಭೆಗೆ ಹಾಜರಾಗಲಿದ್ದಾರೆ. ಎನ್‌ಸಿಪಿಯ ಶರದ್‌ ಪವಾರ್‌, ಆರ್‌ಜೆಡಿಯ ಲಾಲೂ ಪ್ರಸಾದ್‌ ಯಾದವ್‌, ತೇಜಸ್ವಿ ಯಾದವ್‌, ಎಸ್ಪಿಯ ಅಖಿಲೇಶ್‌ ಯಾದವ್‌, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ನ್ಯಾಷನಲ್‌ ಕಾನ್ಫರೆನ್ಸ್‌ನ ಓಮರ್‌ ಅಬ್ದುಲ್ಲಾ, ಆಪ್‌ನ ಅರವಿಂದ್‌ ಕೇಜ್ರಿವಾಲ್‌, ಪಿಡಿಪಿಯ ಮೆಹಬೂಬಾ ಮುಫ್ತಿ, ಎಡಪಕ್ಷಗಳ ಸೀತಾರಾಂ ಯೆಚೂರಿ, ಡಿಎಂಕೆಯ ಎಂ.ಕೆ.ಸ್ಟಾಲಿನ್‌ ಮುಂತಾದವರು ಭಾಗಿಯಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments