ಚಿತ್ರದುರ್ಗ : ಏಳು ಸುತ್ತಿನ ಕೋಟೆ ಚಿತ್ರದುರ್ಗದಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಅವರ ವರ್ಚಸ್ಸು ಹೆಚ್ಚುತ್ತಿದ್ದು, ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ಮುಂದುವರಿಸಿದ್ದಾರೆ.
ಇಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಇಂಗಳದಾಳು, ಸೊಂಡೆಕೊಳ, ಅನ್ನೇಹಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಿ.ರಘು ಆಚಾರ್ ಅವರು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಇದೇ ಸಂಧರ್ಭದಲ್ಲಿ ಅಭಿಮಾನಿಗಳು ಬೆಂಬಲಿಗರು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಅದ್ದೂರಿ ಸ್ವಾಗತ ಕೋರಿದರು.
ಪ್ರಚಾರದ ನಡುವೆ ಮಾತನಾಡಿದ ಜಿ.ರಘು ಆಚಾರ್ ಅವರು, ನಾನು ಕೊಟ್ಟ ಮಾತಿನಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ‘ನವ ಚಿತ್ರದುರ್ಗ’ ನಿರ್ಮಾಣಕ್ಕೆ ಜೆಡಿಎಸ್ ಅಭ್ಯರ್ಥಿಯಿಂದ ಪ್ರತ್ಯೇಕ ಪ್ರಣಾಳಿಕೆ
ನನಗೆ ಒಂದು ಬಾರಿ ಅವಕಾಶ ಕೊಟ್ಟು ನೋಡಿ, ಚಿತ್ರದುರ್ಗದ ಸಮಗ್ರ ಅಭಿವೃದ್ಧಿ ಮಾಡಿ ತೋರಿಸುತ್ತೇನೆ,. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ, ಬಡವರಿಗೂ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವಂತೆ ಮಾಡುತ್ತೇನೆ ಎಂದು ಜಿ.ರಘು ಆಚಾರ್ ಅವರು ಹೇಳಿದರು.
ಚಿತ್ರದುರ್ಗ ಲಂಚಮುಕ್ತ ಆಗಬೇಕು
ಶಾಲೆ ಕಾಲೇಜುಗಳು ತುಂಬಿ ತುಳುಕಬೇಕು. ಆಸ್ಪತ್ರೆಗಳು ಖಾಲಿ ಹೊಡೆಯಬೇಕು. ರೈತರು ಸಾಲ ಕೊಡುವಂತೆ ಆಗಬೇಕು. ಚಿತ್ರದುರ್ಗ ಲಂಚಮುಕ್ತ ಆಗಬೇಕು. ಪ್ರತಿ ಮನೆ ಮನೆಗೂ ಮೂಲಭೂತ ಸೌಕರ್ಯಗಳು ತಲುಪಬೇಕು. ಇದು ನನ್ನ ಕನಸು. ನನಗೆ ಈ ಬಾರಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ದುರ್ಗದ ಸರ್ವತೋಮುಖ ಅಭಿವೃದ್ಧಿ
ಭೀಮಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲಿಕಟ್ಟೆ, ಬೆಟ್ಟದನಾಗೇನಹಳ್ಳಿ, ಎನ್ ಬಳ್ಳಿಕಟ್ಟೆ ಹಾಗೂ ಮಳಲಿ ಗ್ರಾಮಗಳಿಗೆ ಭೇಟಿ ನೀಡಿ ರೋಡ್ ಶೋ ಮುಖಾಂತರ ಮತಯಾಚನೆ ಮಾಡಿದರು. ಮೇ 10 ರಂದು ತಪ್ಪದೇ ಮತದಾನ ಮಾಡಿ. ದುರ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಬಾರಿ ಜೆಡಿಎಸ್ ಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಎಂದು ಕೋರಿದರು.