Saturday, April 20, 2024

ಪವರ್ ಟಿವಿ IMPACT : ಭ್ರಷ್ಟ ಶಾಸಕರ ವಿರುದ್ಧ ದಾಖಲಾಗುತ್ತೆ ಎಫ್ಐಆರ್!

ಬೆಂಗಳೂರು : ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ರಾಜ್ಯದ 19 ಭ್ರಷ್ಟ ಶಾಸಕರ ಲಂಚೋತ್ಸವವನ್ನು ಪವರ್​ ಟಿವಿ ರಾಜ್ಯದ ಜನತೆಯ ಮುಂದೆ ಬಯಲಿಗೆಳೆದಿತ್ತು. ಇದೀಗ ಪವರ್ ಬೇಟೆಯಿಂದ ಬಣ್ಣ ಕಳಚಿಕೊಂಡಿರುವ ಶಾಸಕರಿಗೆ ಲಂಚಾ ಪುರಾಣದ ಪ್ರಕರಣದಲ್ಲಿ ಬಂಧನ ಭೀತಿ ಎದುರಾಗಿದೆ!

ಹೌದು, ನಿವೃತ್ತ ಪೊಲೀಸ್​ ಅಧೀಕ್ಷಕರರೊಬ್ಬರು ಲೋಕಾಯುಕ್ತ, ಮುಖ್ಯ ಚುನಾವಣಾ ಆಯೋಗಕ್ಕೆ ಶಾಸಕರ ಲಂಚೋತ್ಸವ ಕುರಿತು ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ. ಈ ಮೇಲ್ ಮೂಲಕ ದೂರು ನೀಡಿದ್ದಾರೆ. ನಿವೃತ್ತ ಎಸ್.ಪಿ. ಕುಮಾರಸ್ವಾಮಿ ದೂರು ನೀಡಿದ್ದಾರೆ. ಎಂಎಲ್ಎಗಳ ವಿರುದ್ದ ಕಾನೂನಾತ್ಮಕ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆ ಮೂಲಕ ಆ ಭ್ರಷ್ಟ ಶಾಸಕರಿಗೆ ತನಿಖೆಯ ಭೀತಿ ಎದುರಾಗಿದೆ.

ಪವರ್ ಟಿವಿ ಸ್ಟಿಂಗ್ ಆಪರೇಶನಲ್ ಗೆ ಇಡೀ ಸರ್ಕಾರ ಮಾತ್ರವಲ್ಲದೆ ವಿಪಕ್ಷ ನಾಯಕರೆಲ್ಲಾ ಶೇಕ್ ಆಗಿದ್ದಾರೆ. ಪವರ್ ಟಿವಿ ಮಾಧ್ಯಮ ಇತಿಹಾಸದಲ್ಲೇ ನಡೆಸಿದ ಅತಿದೊಡ್ಡ ಸ್ಟಿಂಗ್​ ಆಪರೇಷನ್​ಗೆ ರಾಜ್ಯದ ಜನತೆ ಶಹಬ್ಬಾಸ್​ಗಿರಿ ಹೇಳಿದ್ದಾರೆ.

ಪವರ್ ಫುಲ್​ ಕಾರ್ಯಾಚರಣೆಗೆ ಸಲಾಂ​

ಮಾಧ್ಯಮ ಇತಿಹಾಸದಲ್ಲೇ ಪವರ್ ಟಿವಿ 19 ಶಾಸಕರ ಭ್ರಷ್ಟಾಚಾರ ಮುಖವಾಡ ಕಳಚಿದೆ. ಓಎಫ್ ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಮೆಗಾ ಡೀಲ್​ ಬಟಾ ಬಯಲು ಮಾಡಿದೆ. ರಾಜ್ಯದಲ್ಲಿ ಪವರ್​​ ಟಿವಿ ಕುಟುಕು ಕಾರ್ಯಾಚರಣೆ ಸಂಚಲನಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ‘ಪವರ್’ ಫುಲ್​ ಕಾರ್ಯಾಚರಣೆಗೆ ಶುಭಾಶಯಗಳ ಮಹಾಪೂರ​ ಹರಿದು ಬಂದಿದೆ.

ತಪ್ಪಿದ್ರೆ ಶಿಸ್ತು ಕ್ರಮದ ಭರವಸೆ

ಇನ್ನೂ ಪವರ್ ಟಿವಿಯ ಸ್ಟಿಂಗ್ ವಿಚಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಮಾನ್ವಿ ಶಾಸಕ ರಾಜ ವೆಂಕಟಪ್ಪ ನಾಯಕ ಅಕ್ರಮ ಬಯಲಾಗಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಅವರಿಗೆ ಸ್ಪಷ್ಟನೆಯನ್ನು ಕೇಳುತ್ತೇನೆ. ತಪ್ಪಿದ್ದರೆ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES