Saturday, December 9, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಈ ಕ್ಷಣಖರ್ಗೆ ಕರ್ಮಭೂಮಿಯಲ್ಲಿ ಬಿಜೆಪಿ ಕಹಳೆ ಮೊಳಗಿದೆ : ಖರ್ಗೆಗೆ ಮೋದಿ ಟಾಂಗ್

ಖರ್ಗೆ ಕರ್ಮಭೂಮಿಯಲ್ಲಿ ಬಿಜೆಪಿ ಕಹಳೆ ಮೊಳಗಿದೆ : ಖರ್ಗೆಗೆ ಮೋದಿ ಟಾಂಗ್

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕರ್ಮಭುಮಿಯಲ್ಲಿ ಬಿಜೆಪಿ ಕಹಳೆ ಮೊಳಗಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ.

ದಾವಣೆಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷರ ತವರಲ್ಲೇ ಮೇಯರ್, ಉಪಮೇಯರ್ ಚುನಾವಣೆ ಇತ್ತು. ಆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಲಬುರಗಿಯಲ್ಲಿ ಬಿಜೆಪಿಯವರೇ ಮೇಯರ್​, ಉಪ ಮೇಯರ್​ ಆಗಿದ್ದಾರೆ ಎಂದು ಬಿಜೆಪಿ ಗೆಲುವನ್ನು ಪ್ರಸ್ತಾಪಿಸಿ ಮಲ್ಲಿಕಾರ್ಜುನ ಖರ್ಗೆಗೆ ಕುಟುಕಿದ್ದಾರೆ.

ಎಂದಿನಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ದಾವಣಗೆರೆಯ ಎಲ್ಲಾ ನನ್ನ ಸಹೋದರ-ಸಹೋದರಿಯರಿಗೆ ನಮಸ್ಕಾರಗಳು. ಬಿಜೆಪಿ ಎಲ್ಲಾ ಕಾರ್ಯಕರ್ತರಿಗೆ ನಮಸ್ಕಾರಗಳು. ದಾವಣಗೆರೆಗೆ ಬಂದಾಗೆಲ್ಲಾ ನಿಮ್ಮ ಆಶೀರ್ವಾದ ಹೆಚ್ಚಾಗುತ್ತಿದೆ. ನಿಮ್ಮ ಆಶೀರ್ವಾದ ನನ್ನ ಶಕ್ತಿ ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಹರಿಹರೇಶ್ವರನಿಗೆ ನನ್ನ ಪ್ರಣಾಮಗಳು

ತಾಯಿ ಭುವನೇಶ್ವರಿ, ಹರಿಹರೇಶ್ವರನಿಗೂ ಹಾಗೂ ಈ ಭಾಗದ ಎಲ್ಲಾ ಮಠಗಳಿಗೂ ನನ್ನ ಪ್ರಣಾಮಗಳು. 4 ವಿಜಯ ಸಂಕಲ್ಪ ಯಾತ್ರೆಗಳು ಇಂದು ಮಹಾಸಂಗಮ ಆಗಿದೆ. ತುಂಗಭದ್ರೆ ತಾಯಿಯ ಆಶೀರ್ವಾದ ನಮ್ಮ ಮೇಲಿದೆ. ಪ್ರತಿ ಬೂತ್​ ಗೆಲ್ಲುವ ಸಂಕಲ್ಪ ಮಾಡಿ ಎಂದು ಕಾರ್ಯಕರ್ತರನ್ನು ಪ್ರಧಾನಿ ಮೋದಿ ಹುರಿದುಂಬಿಸಿದರು.

ನಿಮ್ಮ ಬೆಂಬಲಕ್ಕೆ ಭಾವುಕನಾಗಿದ್ದೇನೆ

ರಾಜ್ಯದಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ರೈತರ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ಕಿಸಾನ್​ ಸಮ್ಮಾನ್​ ಮೂಲಕ ನಾವು ರೈತರಿಗೆ ಸಹಾಯ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ರೈತರ ಖಾತೆಗೆ ನೇರವಾಗಿ ಹಣ ಹಾಕುತ್ತಿದೆ. ಬಿಜೆಪಿ ಯಾತ್ರೆಯ ಪ್ರತಿ ಮಾಹಿತಿಯನ್ನೂ ನಾನು ಪಡೆಯುತ್ತಿದೆ. ಇಷ್ಟೊಂದು ಜನರನ್ನು ನೋಡಿ ನಾನು ಭಾವುಕನಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments