Friday, April 19, 2024

ಈ.. ಆನೆ ನೋಡಲು ಬರುತ್ತಿದೆ ಜನಸಾಗರ

ಬೆಂಗಳೂರು : ಈ ಬಾರಿಯ ಆಸ್ಕರ್ ಭಾರತಕ್ಕೆ ತುಂಬಾ ವಿಶೇಷವಾಗಿತ್ತು. ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ ದಕ್ಷಿಣ ಭಾರತದ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿದೆ. ಮುದುಮಲೈ ಟೈಗರ್ ರಿಸ್ಪರರ್ಸ್ ನಲ್ಲಿ ಅನಾಥ ಆನೆ ಮರಿಯನ್ನು ದಂಪತಿ ಪೋಷಿಸುವುದನ್ನು ಈ ಕಿರು ಚಿತ್ರ ಹೊಂದಿದೆ. ಈ ಕಿರು ಚಿತ್ರಕ್ಕೆ ಆಸ್ಕರ್ ಒಲಿದ ಬಳಿಕ ಆ ಆನೆ ಮರಿಯನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ.

ಹೌದು, ಎಲಿಫೆಂಟ್ ವಿಸ್ಪರರ್ಸ್ ಭಾರತದ ಮೊದಲ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಾಕ್ಷ್ಯಚಿತ್ರವಾಗಿದೆ. 95ನೇ ಅಕಾಡೆಮಿ ಪ್ರಶಸ್ತಿಯಲ್ಲಿ ‘ಸ್ಟ್ರೇಂಜರ್ ಅಟ್ ದಿ ಗೇಟ್’ ಮತ್ತು ‘ಹೌ ಡು ಯು ಮೆಷರ್ ಎ ಇಯರ್’ ನಂತಹ ಸಾಕ್ಷ್ಯಚಿತ್ರಗಳನ್ನು ಹಿಂದಿಕ್ಕಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗಾ ಈ ಸಾಕ್ಷ್ಯಚಿತ್ರದಲ್ಲಿ ಸಾಕಷ್ಟು ಜನರ ಮನಗೆದ್ದ ಮರಿ ಆನೆ ರಘು ಭಾರೀ ಸುದ್ದಿಯಲ್ಲಿದೆ.

ತಮಿಳುನಾಡಿನ ಮುದುಮಲೈ ಅರಣ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ರಘು ಆನೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುದುಮಲೈ ತೆಪ್ಪಕಾಡುಗೆ ಬರುವುದನ್ನು ಕಾಣಬಹುದು.

ಪ್ರಕೃತಿ-ಬುಡಕಟ್ಟು ಜನರ ಸಾಮರಸ್ಯ

ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಅನಾಥ ಮರಿ ಆನೆಗಳನ್ನು ದತ್ತು ತೆಗೆದುಕೊಳ್ಳುವ ಸುತ್ತ ಸುತ್ತುವ  ಭಾವನಾತ್ಮಕ ಕಥೆ ಇದಾಗಿದ್ದು, ಪ್ರಕೃತಿಯೊಂದಿಗಿನ ಬುಡಕಟ್ಟು ಜನರ ಸಾಮರಸ್ಯವನ್ನೂ ತಿಳಿಸುತ್ತದೆ.

‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ತಮಿಳು ಭಾಷೆಯಲ್ಲಿದ್ದು, ಈಗ ಮತ್ತೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಿರುಚಿತ್ರದಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಇದೆ.

RELATED ARTICLES

Related Articles

TRENDING ARTICLES