ಬೆಂಗಳೂರು : ಜಾರ್ಖಂಡ್ನ ಐಎಎಸ್ ಅಧಿಕಾರಿಯೊಬ್ಬರಿಗೆ ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಇಂದು ಶಾಕ್ ನೀಡಿದ್ದು, ಬರೋಬ್ಬರಿ 3 ಕೋಟಿ ರೂ. ನಗದು ವಶಕ್ಕೆ ಪಡೆದಿದ್ದಾರೆ.
ಹೌದು, ಜಾರ್ಖಂಡ್ನ ಹಲವು ಸ್ಥಳಗಳಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಜಾರ್ಖಂಡ್ ಜೆಎಸ್ಎಂಡಿಸಿ (ರಾಜ್ಯ ಖನಿಜ ಅಭಿವೃದ್ಧಿ ನಿಗಮ) ಮಾಜಿ ಉದ್ಯೋಗಿ ಅಶೋಕ್ ಕುಮಾರ್ ಮತ್ತು ಎಹ್ಸಾನ್ ಅನ್ಸಾರಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಶಾಸಕರ ಪುತ್ರ ಪ್ರಶಾಂತ್ ಗೆ 14 ದಿನ ನ್ಯಾಯಾಂಗ ಬಂಧನ
ಅಶೋಕ್ ಕುಮಾರ್ ಮತ್ತು ಎಹ್ಸಾನ್ ಅನ್ಸಾರಿಗೆ ಸೇರಿದ ರಾಂಚಿ ಮತ್ತು ಹಜಾರಿಬಾಗ್ನಲ್ಲಿರುವ 14 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಅನ್ಸಾರಿ ಬಳಿ 3 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.ಈ ಹಣ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ಗೆ ಸಂಬಂಧಿಸಿದ್ದಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ