Thursday, April 18, 2024

ಪಾರಿವಾಳ ಹಿಡಿಯಲು ಹೋಗಿ ಪ್ರಾಣಕ್ಕೆ ಸಂಚಕಾರ

ಬೆಂಗಳೂರು : ಪಾರಿವಾಳ ಹಿಡಿಯಲು ಹೋಗಿ ಹೈ ಟೆನ್ಷನ್ ವೈರ್‌ ತಗುಲಿದ ಘಟನೆ ವಿಜಯಾನಂದ ನಗರದಲ್ಲಿ ನಡೆದಿದೆ.

ಪಾರಿವಾಳ ಹಿಡಿಯಲು ಹೋಗಿ ಪ್ರಾಣಕ್ಕೆ ಸಂಚಕಾರ ಆಗಿದ್ದು, ಸಾವು-ಬದುಕಿನ ಮಧ್ಯೆ ಇಬ್ಬರು ಮಕ್ಕಳ ಹೋರಾಟ ಮಾಡುತ್ತಿದ್ದಾರೆ. ಸುಪ್ರೀತ್ (10), ಚಂದನ್ (11) ಪರಿಸ್ಥಿತಿ ಚಿಂತಾಜನಕವಾಗಿದೆ.

ಇನ್ನು, ಮನೆ ಮೇಲೆ ಪಾರಿವಾಳ ಹಿಡಿಯಲು ಹೋಗಿದ್ದ ಮಕ್ಕಳು, ಮನೆ ಮೇಲಿದ್ದ ಕಬ್ಬಿಣದ ರಾಡ್​ ಹಿಡಿದಿದ್ದಕ್ಕೆ ಶಾಕ್‌ ತಗುಲಿದೆ. ಸ್ಥಳಕ್ಕೆ ಸಚಿವ ಗೋಪಾಲಯ್ಯ ಭೇಟಿ ನೀಡಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

RELATED ARTICLES

Related Articles

TRENDING ARTICLES