Saturday, April 20, 2024

ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ

ಬೆಂಗಳೂರು : ಇತ್ತೀಚಿಗೆ ಚಿರತೆಗಳು ಕಾಡು ಬಿಟ್ಟು ಹಳ್ಳಿಗಳಿಲ್ಲಿ ಪ್ರತ್ಯಕ್ಷವಾಗಿ ಜನರನ್ನು ಬೆಚ್ಚಿ ಬೀಳಿಸುತ್ತಿದ್ದವು. ಆದರೆ ಈಗ ಚಿರತೆ ಸಿಲಿಕಾನ್​ ಸಿಟಿ ಬೆಂಗಳೂರಿಗೂ ಎಂಟ್ರಿ ಕೊಟ್ಟು ಜನರಲ್ಲಿ ಆತಂಕ ಮೂಡಿಸಿದೆ.

ನಗರದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಕೆಂಗೇರಿ ಸಮೀಪದ ಕೋಡಿಪಾಳ್ಯದಲ್ಲಿ ಜಿಂಕೆಯನ್ನು ಬೇಟೆಯಾಡಿ, ಜಿಂಕೆಯ ಮೃತದೇಹವನ್ನ ನಗರ ಪ್ರದೇಶಕ್ಕೆ ತಂದು ಹಾಕಿದೆ. ಕೋಡಿಪಾಳ್ಯ ಪ್ರದೇಶದಲ್ಲಿ 4 ಚಿರತೆಗಳು ಓಡಾಡುತ್ತಿದ್ದು,ಇದರಿಂದ ಸಿಲಿಕಾನ್​ಸಿಟಿ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯಿಂದ ಚಿರತೆ ಸೆರೆಗೆ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES