Saturday, April 20, 2024

ತೆರೆಮೇಲೆ‌ ಅಪ್ಪಳಿಸರಲಿರುವ ಸಿದ್ದರಾಮಯ್ಯ ಜೀವನ ಚರಿತ್ರೆ

ಕೊಪ್ಪಳ : ರಾಜ್ಯದ ಮಾಜಿ ಮುಖ್ಯಮಂತ್ರಿ ಬಯೋಪಿಕ್ ತೆರೆಗೆ ಸಿದ್ದತೆ ನಡೆದಿದ್ದು, ಸಿದ್ದರಾಮಯ್ಯ ಪಾತ್ರಕ್ಕೆ ವಿಜಯ ಸೇತುಪತಿ ಬಣ್ಣ ಹಚ್ಚಲಿದ್ದಾರೆ.

ಕೊಪ್ಪಳ ಮೂಲದ ನಿರ್ಮಾಪಕರಿಂದ ಚಲನಚಿತ್ರ ಪ್ರಾರಂಭಿಸುವ ಚಿಂತನೆ ನಡೆದಿದ್ದು, ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಹಯಾತ್ ಪೀರ್ ಸಾಬ್ ಅವರ MS ಕ್ರೀಯೆಷನ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಲಿದೆ.

ಈಗಾಗಲೇ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನೆಡಸಿರುವ ನಿರ್ಮಾಪಕರು, ಮಾಜಿ ಸಚಿವ ಶಿವರಾಜ್ ತಂಗಡಗಿ, ಹಾಗೂ ಜಮೀರ್ ಆಹ್ಮಮದ್ ನೇತೃತ್ವದಲ್ಲಿ ನೆಡದ‌ ಮೊದಲ ಸುತ್ತಿನ ಮಾತುಕತೆ ನಡೆಯಲಿದೆ. ಸಿದ್ದರಾಮಯ್ಯ ಅವರಿಂದ ಬಯೋಪಿಕ್ ಚಿತ್ರಕ್ಕೆ ಗ್ರಿನ್ ಸಿಗ್ನಲ್ ಸಿಕ್ಕಿದ್ದು, ಹೈ ಬಜೆಟ್ ನಲ್ಲಿ ಸಿದ್ದರಾಮಯ್ಯ ಬಯೋಪಿಕ್ ಚಿತ್ರಿಕರಣವಾಗಲಿದೆ.

RELATED ARTICLES

Related Articles

TRENDING ARTICLES