Saturday, April 20, 2024

ಮುಂಜಾನೆ ಮಂಜಿನ ಸೊಬಗಿಗೆ ಮನಸೋತ ಪ್ರಕೃತಿ ಪ್ರೇಮಿಗಳು

ಚಾಮರಾಜನಗರ: ಪುರಾಣ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟ ಹಾಗೂ ಹಿಮವದ್ ಗೋಪಾಲಸ್ವಾಮಿ ಸ್ವಾಮಿ ಬೆಟ್ಟ ಮುಂಜಾನೆಯೇ ಮಂಜಿನಿಂದ ಆವರಿಸಿಕೊಂಡಿದೆ.

ಮೊದಲೇ ಹಸಿರು ಹೊದಿಕೆಯಂತಿರುವ ಬಿಳಿಗಿರಿರಂಗನತಿಟ್ಟು ಹಾಗು ಹೆಸರಲ್ಲೇ ಹಿಮವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಮಣೀಯ ದೃಶ್ಯ ನೋಡುಗರ ಮನಸೂರೆಗೊಳಿಸಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದಟ್ಟವಾದ ಮಂಜು ಆವರಿಸಿದ್ದು ಬೆಳ್ಳಿಗೆ 9 ಗಂಟೆಯಾದರೂ ದಟ್ಟವಾದ ಮಂಜಿನಿಂದ ಪ್ರಕೃತಿಯ ಸೌಂದರ್ಯ ದುಪ್ಪಟ್ಟು ಆಗಿದೆ.

ಚಾಮರಾಜನಗರ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲಾದ್ಯಂತ ಇದೇ ರೀತಿಯ ಮಂಜು ಆವರಿಸಿದ್ದು , ಈ ಹಿಮದ ವಾತಾವರಣದಿಂದಾಗಿ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಾದ ಪ್ರಕೃತಿ ತಾಣಗಳಲ್ಲಿ ಮತ್ತಷ್ಟು ಸೊಬಗು ಹೆಚ್ಚಾಗಿ ಪ್ರಕೃತಿ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು ಎಂಬಂತಿದೆ. ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರಿಗೆ ಮತ್ತಷ್ಟು ಖುಷಿ ನೀಡಿದೆ ಈ ಪ್ರಕೃತಿ ವೈಭವ.

RELATED ARTICLES

Related Articles

TRENDING ARTICLES