Saturday, June 10, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜ್ಯಒಡನಾಡಿ ಸಂಸ್ಥೆಯ ಮಕ್ಕಳಿಂದ ಇಂದು ಕರಾಳ ದಿನಾಚರಣೆ ಆಚರಣೆ

ಒಡನಾಡಿ ಸಂಸ್ಥೆಯ ಮಕ್ಕಳಿಂದ ಇಂದು ಕರಾಳ ದಿನಾಚರಣೆ ಆಚರಣೆ

ಮೈಸೂರು: ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನ ಇಂದು ಆಚರಣೆ ಮಾಡಲಾಗುತ್ತಿದೆ. ಆದರೆ, ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ಕರಾಳ ದಿನವಾಗಿ ಆಚರಣೆ ಮಾಡಲಾಯಿತು.

ರಾಜ್ಯದ ಪ್ರತಿಸ್ಠಿತ ಸ್ವಾಮೀಜಿಯಿಂದ ಮಕ್ಕಳ ಮೇಲೆ ಕಿರುಕುಳಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮಕ್ಕಳಿಗೆ ಈ ಕೇಸ್​ನಲ್ಲಿ ನ್ಯಾಯ ದೊರಕುತ್ತಿಲ್ಲ. ಈ ವೇಳೆ ಸಂಭ್ರಮದ ಆಚರಣೆ ಸೂಕ್ತವಲ್ಲ ಎಂದು ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರುಶುರಾಮ್ ಸೇರಿ ಮಕ್ಕಳೊಂದಿಗೆ ಕರಾಳ ದಿನ ಆಚರಣೆ ಮಾಡಿದ್ದಾರೆ.

ಈ ಮಕ್ಕಳಿಗೆ ನ್ಯಾಯಕ್ಕಾಗಿ ಇಂದು ನಾಡಿನ ಜನತೆ ಮಕ್ಕಳ ನ್ಯಾಯಕ್ಕಾಗಿ ಒಂದು ನಿಮಿಷ ಮೌನಚರಣೆ ಮಾಡಿ ಕನಿಷ್ಠ ಒಂದು ರೂಪಾಯಿ ನೀಡುವ ಮೂಲಕ ಕಿರುಕುಳಕ್ಕೆ ಒಳಗಾದ ಮಕ್ಕಳ ಪರ ನಿಲ್ಲಬೇಕು. ಮಕ್ಕಳಿಗೆ ನ್ಯಾಯ ದೊರೆಯುವಂತಾಗಬೇಕು ಎಂದರು.

ಈ ಹಿನ್ನೆಲೆ ಇಂದು ಕಪ್ಪು ಪಟ್ಟಿ ಧರಿಸಿ ಮಕ್ಕಳ ದಿನಾಚರಣೆಯ ಕರಾಳ ದಿನ ಆಚರಣೆ ಮಾಡುತ್ತಿದ್ದೇವೆ ಎಂದು ಒಡನಾಡಿ ಸೇವಾ ಸಂಸ್ಥೆ ನ್ಯಾಯಕ್ಕಾಗಿ ಒತ್ತಾಯ ಮಾಡಿದರು.

Most Popular

Recent Comments