ಬಳ್ಳಾರಿ: ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶ ಹಿನ್ನಲೆ, ಬಿಜೆಪಿ ಆಫೀಸ್ನಲ್ಲಿ ಕಾಲ್ ಸೆಂಟರ್ ಉದ್ಘಾಟನೆ, ಬಳ್ಳಾರಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಕಾಲ್ ಸೆಂಟರ್ ಓಪನ್, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಕಾಲ್ ಸೆಂಟರ್ ಉದ್ಘಾಟನೆ ಮಾಡಿದ್ದಾರೆ.
ಉದ್ಘಾಟನೆ ಬಳಿಕ ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆ, ನ. 20 ರಂದು ಬಳ್ಳಾರಿ ಎಸ್ಟಿ ಮೋರ್ಚಾ ಸಮಾವೇಶ ನಡೆಲಿದೆ,
ಟಿ.ಬಿ ಸ್ಯಾನೋಟಿರಂ ಪಕ್ಕ ಮೈದಾನದಲ್ಲಿ ಸಮಾವೇಶ,10 ಲಕ್ಷ ಜನ ಬರುವ ನಿರೀಕ್ಷೆ ಇದೆ.
ಈಗಾಗಲೇ ಯುಪಿ ಸಿಎಂ ಯೋಗಿ ಅದಿತ್ಯನಾಥ್ , ಜೆಪಿ ನಡ್ಡಾ, ಅಮಿತ್ ಶಾ ಅವ್ರಿಗೆ ಆಹ್ವಾನ ನೀಡಲಾಗಿದೆ,
ಮೂವರ ಪೈಕಿ ಒಬ್ಬರು ಬಳ್ಳಾರಿ ಸಮಾವೇಶಕ್ಕೆ ಬರುತ್ತಾರೆ. ಸಿಎಂ ಬೊಮ್ಮಾಯಿ ಆದಿಯಾಗಿ ರಾಜ್ಯದ ಎಲ್ಲ ನಾಯಕರು ಬರುತ್ತಾರೆ.
ರಾಜ್ಯದ ಮೂಲೆ ಮೂಲೆ ಕಾರ್ಯಕರ್ತರ ತಲುಪಲು ಕಾಲ್ ಸೆಂಟರ್ ಒಪನ್ ಮಾಡಲಾಗಿದೆ, ಬೃಹತ್ ಸಮಾವೇಶಕ್ಕೆ ಸಹಸ್ರ ಜನ ಸೇರ್ತಿರೋ ಕಾರಣ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.