Saturday, April 20, 2024

ಬದಾಮಿಯಲ್ಲಿ ಡಿಕೆಶಿ ನಿಗೂಢ ಒಡಾಟ..!

ಬಾಗಲಕೋಟೆ: ಬದಾಮಿಯಲ್ಲಿ ಡಿಕೆಶಿ ನಿಗೂಢವಾಗಿ ಓಡಾಡಿದ ವಿಚಾರ ಈಗ ಎಲ್ಲೆಡೆ ಬಾರಿ ಸುದ್ದಿಯಾಗಿದೆ. ಈ ಕುರಿತು ಡಿಕೆ ಶಿವಕುಮಾರ್ ಹೇಳಿಕೆ ನಿಡಿದ್ದಾರೆ.

ಈ ಕುರಿತು ಮಾತನಾಡಿದ ಡಿಕೆಶಿ, ರೀ ನನಗೆ ರಾಜಕೀಯದಂತೆ ಖಾಸಗಿ ವಿಚಾರಗಳೂ ಇರುತ್ತದೆ. ಖಾಸಗಿ ಕೆಲಸಕ್ಕೆ ನಾನು ಬಾಗಲಕೋಟೆ ಹೋಗಿದ್ದು ನಿಜ. ಅಲ್ಲೆ ರಸ್ತೆಯಲ್ಲಿ ಬಾಳೆಹಣ್ಣು, ಬಿಸ್ಕಿಟ್ ತಿನ್ನೋದಕ್ಕೆ ಅಂತ ನಿಲ್ಲಿಸಿದ್ದೆ. ಯಾರೋ ಯುವಕ ಫೋಟೋ ತಗೋತಿನಿ ಅಂದ. ಕಾರಲ್ಲೇ ಕೂತು ಫೋಟೋ ತೆಗೆದುಕೊಂಡ. ನಾನು ಖಾಸಗಿ ವಿಷಯಗಳಿಗೆ ಓಡಾಡಲೇಬಾರದು ಅಂತ ಇದೆಯಾ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES