Saturday, April 20, 2024

‘ಪೇ ಸಿಎಂ’ ಅಭಿಯಾನ ಕೈಬಿಡುವಂತೆ ಯಡಿಯೂರಪ್ಪ ಒತ್ತಾಯ.!

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಅಂತಹವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಈ ರೀತಿ ಮಾಡುವಂತಹದ್ದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜ್ಯ ಕಾಂಗ್ರೆಸ್‌ನ ಪೇ ಸಿಎಂ ಅಭಿಯಾನ ವಿಚಾರವಾಗಿ ಕಿಡಿಕಾರಿದ್ದಾರೆ.

ಇಂದು ಜಿಲ್ಲೆಯ ಬೇಲೂರಿನಲ್ಲಿ ಯಡಿಯೂರಪ್ಪ ಪ್ರತಿಕ್ರಿಯಿಸಿ, ಕಮೀಷನ್​ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಅವಕಾಶವಿದೆ. ಸುಮ್ಮನೆ 40% ಅಂತ ಆರೋಪ ಮಾಡೋದು ಸರಿಯಲ್ಲ. ನಮ್ಮ‌ ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಗೊಂದಲ ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬರುತ್ತದೆ ಹೊರತು, ಬಸವರಾಜ ಬೊಮ್ಮಯಿ ಅಥವಾ ಬೇರೆಯವರ ಗೌರವಕ್ಕೆ ಧಕ್ಕೆ ಬರುವುದಿಲ್ಲ.

ಇನ್ನಾದರೂ ಈ ರೀತಿಯ ನಿಮ್ಮ ಅತಿರೇಕದ ವರ್ತನೆ ಏನಿದೆ. ಜನ ಛೀಮಾರಿ ಹಾಕುವ ಮುಂಚೆ ಪೇ ಸಿಎಂ ತರ ಕೆಲಸ ಬಿಡಬೇಕೆಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡರಿಗೆ ಯಡಿಯೂರಪ್ಪ ಅವರು ಒತ್ತಾಯ ಮಾಡಿದರು.

ದೇಶದಲ್ಲಿ ಕಾಂಗ್ರೆಸ್​ ಪರಿಸ್ಥಿತಿ ಏನಾಗಿದೆ ಇವತ್ತು, ಪಕ್ಷ ಧೂಳಿಪಟವಾಗಿದೆ. ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಈ ರೀತಿಯ ವರ್ತನೆಯಿಂದ ಅದನ್ನು ಅವರು ಕಳೆದುಕೊಳ್ಳುತ್ತಾರೆ ಅಂತ ನನಗೆ ಅನ್ನಿಸುತ್ತಿದೆ.

ಮೊದಲು ಗೌರವ ನಡೆದುಕೊಳ್ಳುವುದನ್ನು ಕಾಂಗ್ರೆಸ್ ಮುಖಂಡರು ಕಲಿಯಬೇಕು. ನಿಮ್ಮ ಅತಿರೇಕದ ಈ ವರ್ತನೆಗೆ ನಮಗು ಅದೇ ಭಾಷೆಯಲ್ಲಿ ಉತ್ತರ ಕೊಡಲು ಬರುತ್ತದೆ. ಆದರೆ, ನಾವು ಆ ಕೆಳಮಟ್ಟಕ್ಕೆ ಇಳಿಯಲು ಸಿದ್ದವಿಲ್ಲ. ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಸಹಿಸದೆ ಈ ರೀತಿಯ ಅಪಪ್ರಚಾರ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಬಿಎಸ್​ ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟರು.

RELATED ARTICLES

Related Articles

TRENDING ARTICLES