Thursday, April 18, 2024

11 ರಾಜ್ಯಗಳಲ್ಲಿ ಎನ್​ಐಎ ದಾಳಿ ನಡುವೆ ಅಮಿತ್ ಶಾ ಮಹತ್ವದ ಸಭೆ

ನವದೆಹಲಿ: ಪಿಎಫ್‌ಐ-ಎಸ್‌ಡಿಪಿಐ ಮುಖಂಡರ ಮನೆ ಹಾಗೂ ಕಚೇರಿ ಮೇಲೆ ದೇಶದ 13 ರಾಜ್ಯಗಳಲ್ಲಿ ಎನ್​ಐಎ, ಇಡಿ ದಾಳಿ ಬಗ್ಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಬಂಧಪಟ್ಟ ಅಧಿಕಾರಿಗಳು ಜತೆಗೆ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ಭದ್ರತಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಂಗ್ರಹಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಲು ಮತ್ತು ಮುಂದಿನ ಕ್ರಮದ ಬಗ್ಗೆ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಭಾಗವಹಿಸುತ್ತಿದ್ದಾರೆ.

ಎನ್‌ಐಎ ಮತ್ತು ಇಡಿಯೊಂದಿಗೆ ದಾಳಿಗಳಲ್ಲಿ ಸಿಕ್ಕ ದಾಖಲಾತಿಗಳ ಮೇಲೆ ಸಮಾಲೋಚಿಸಿ, ಇಂಟೆಲಿಜೆನ್ಸ್ ಬ್ಯೂರೋದಿಂದ ತೀವ್ರವಾದ ತನಿಖೆಗಳ ನಂತರ ಪಿಎಫ್​ಐ ಹಾಗೂ ಎಸ್​ಡಿಪಿಐ ಬ್ಯಾನ್​ ಮಾಡಬೇಕು ಎಂಬುದರ ಕುರಿತು ಚರ್ಚೆ ಈ ಸಭೆಯಲ್ಲಿ ನಡೆಯಲಿದೆ.

ದೇಶಾದ್ಯಂತ ಏಕಕಾಲದಲ್ಲಿ ನಡೆದ 11 ರಾಜ್ಯಗಳ ದಾಳಿಯಲ್ಲಿ ಪಿಎಫ್‌ಐನ 106 ಕಾರ್ಯಕರ್ತರನ್ನು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ ಬಂಧಿಸಲು ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ ಗರಿಷ್ಠ ಸಂಖ್ಯೆಯ ಬಂಧನಗಳನ್ನು ಮಾಡಲಾಗಿದೆ (22) ನಂತರ ಮಹಾರಾಷ್ಟ್ರ ಮತ್ತು ಕರ್ನಾಟಕ (ತಲಾ 20), ತಮಿಳುನಾಡು (10), ಅಸ್ಸಾಂ (9), ಉತ್ತರ ಪ್ರದೇಶ (8), ಆಂಧ್ರಪ್ರದೇಶ (5), ಮಧ್ಯಪ್ರದೇಶ (4) , ಪುದುಚೇರಿ ಮತ್ತು ದೆಹಲಿ (ತಲಾ 3) ಮತ್ತು ರಾಜಸ್ಥಾನ (2).

RELATED ARTICLES

Related Articles

TRENDING ARTICLES