Thursday, April 25, 2024

ರಿಲೀಸ್​ಗೂ ಮುನ್ನ ರಿವೀಲ್ ಆಯ್ತು ‘ಬೆಂಕಿ’ ಹಾರರ್ ಸೀಕ್ವೆನ್ಸ್

ರಾಮಾರ್ಜುನ ಅವತಾರದಲ್ಲಿ ಜಗಮಗಿಸಿದ್ದ ಅನೀಶ್​ ಹಳ್ಳಿ ಹುಡುಗನಾಗಿ ಬೆಂಕಿ ಅವತಾರದಲ್ಲಿ ಸಿಡಿಯೋಕೆ ಸಜ್ಜಾಗಿದ್ದಾರೆ. ಅಣ್ಣ ತಂಗಿ ಎಮೋಷನ್​​ ಜೊತೆಗೆ ಮುದ್ದಾದ ಪ್ರೇಮಕಥೆಯ ಮಿಕ್ಸ್​ ಮಸಾಲ ಸಿನಿಮಾ ಇದು. ಚಿತ್ರದ ಟ್ರೈಲರ್​, ಪೋಸ್ಟರ್​​ಗಳು ಗಟ್ಟಿ ಕಥೆಯ ಸಾರಾಂಶವನ್ನು ಒತ್ತಿ ಒತ್ತಿ ಹೇಳುತ್ತಿವೆ. ಯೆಸ್​​​.. ಬೆಂಕಿ ಟೀಮ್​ ಕಡೆಯಿಂದ ಮತ್ತೊಂದು ಬೆಚ್ಚಿ ಬೆವರಿಳಿಸೋ ವೀಡಿಯೋ ರಿಲೀಸ್ ಆಗಿದೆ.

ರಿಲೀಸ್​ಗೂ ಮುನ್ನ ರಿವೀಲ್ ಆಯ್ತು ಬೆಂಕಿ ಹಾರರ್ ಸೀಕ್ವೆನ್ಸ್

ಹಳ್ಳಿ ಹುಡುಗನ ಬೆಂಕಿ ಗೆಟಪ್​​​.. ಥ್ರಿಲ್ಲರ್​ ಲವ್​ಸ್ಟೋರಿ ಮಿಕ್ಸಪ್​​​

ಭೂತ ಬಂಗಲೆಯೊಳಗೆ ಆಪ್ತಮಿತ್ರನ ಕಾಟ, ಪೀಕಲಾಟ..!

ಅಣ್ಣ – ತಂಗಿ ಎಮೋಷನ್​​​​​ ಜತೆ ಮುದ್ದು ಗುಮ್ಮನ ಭಯ

ಮಾಸ್​ ಸಿನಿಮಾಗಳ ಮೂಲಕ ಚಿರಪರಿಚಿತರಾದ ಅನೀಶ್​ ಮೊದಲ ಬಾರಿಗೆ ಕ್ಲಾಸಿಕ್​ ಹಳ್ಳಿ ಗೆಟಪ್​​ನಲ್ಲಿ ಕಾಣಿಸಿಕೊಳ್ತಿದ್ದಾರೆ. ಹೆಗಲ ಮೇಲೆ ಟವೆಲ್​​, ಕಾಲಲ್ಲಿ ಸಿಂಪಲ್​​ ಪಾದರಕ್ಷೆ, ವೈಟ್​​ ಪಂಚೆಯಲ್ಲಿ, ಪಕ್ಕಾ ಜವಾರಿ ಹಳ್ಳಿ ಹೈದನಾಗಿದ್ದಾರೆ. ಅನೀಶ್​​ ಹೀರೋ ಆಗಿ ಇದು ಹತ್ತನೇ ಸಿನಿಮಾ. ಎಲ್ಲಾ ಕಥೆಗಳು ಸಿಟಿ ಬ್ಯಾಕ್​​ಡ್ರಾಪ್​​ನಲ್ಲಿ ಸಾಗ್ತಾ ಇದ್ವು. ಆದ್ರೆ, ಇದು ಪಕ್ಕಾ ಹಳ್ಳಿಯ ನಾಟಿ ಸೊಗಡಿನ ಕಥೆಯಾಗಿದೆ.

ಕಥೆ ಕೇಳಿದ ತಕ್ಷಣ ಓಕೆ ಮಾಡಿದ ಅನೀಶ್​​​​,ಸಿಕ್ಕಾಪಟ್ಟೆ ಇಷ್ಟ ಪಟ್ಟು ಮಾಡಿದ್ದಾರೆ. ಇಂತಹ ಕಥೆಗಾಗಿ ಕಾಯ್ತಿದ್ದ ಅನೀಶ್​​​ಗೆ ಇದು ಸಖತ್​ ಸ್ಪೆಷಲ್​ ಸಿನಿಮಾವಾಗಿದೆ. ಹೊಸತನದ ಪಾತ್ರ, ಹೊಸತನದ ಕಥೆ, ಹಾಗೂ ಮಾತಿನ ಶೈಲಿ, ಬಾಡಿ ಲಾಂಗ್ವೇಜ್​ ಎಲ್ಲವೂ ಹೊಸದಾಗಿ ಬದಲಾಯಿಸಿಕೊಂಡು ಹೊಸ ಗೆಸ್ಟರ್​​ನಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ ಅನೀಶ್​​. ಲವ್​​,ಆ್ಯಕ್ಷನ್​​​, ಸೆಂಟಿಮೆಂಟ್​​ ಎಲ್ಲವೂ ಇರೋ ಬೆಂಕಿ ಚಿತ್ರತಂಡದಿಂದ ಹೊಸ ವೀಡಿಯೋ ರಿವೀಲ್​ ಆಗಿದೆ. ಸದ್ಯ ಈ ವೀಡಿಯೋ ತುಣುಕು, ಬೆಂಕಿ ತರಹ ಎಲ್ಲಾ ಕಡೆ ಹಬ್ಬಿ ವೈರಲ್​ ಆಗ್ತಿದೆ

ಅನೀಶ್​​ಗೆ ನಾಯಕಿಯಾಗಿ ಸಂಪದ ಗ್ಲಾಮರಸ್ ಆಗಿ ಕಾಣಿಸಿದ್ದಾರೆ. ಈ ವಾರ  ರಾಜ್ಯಾದ್ಯಂತ ತೆರೆಗೆ ಬರೋಕೆ ಸಿದ್ಧವಾಗಿರೋ ಬೆಂಕಿ ಸಿನಿಮಾ ಭಯಂಕರವಾಗಿ ಬೆಚ್ಚಿ ಬೀಳಿಸಲಿದೆ. ಬೆಂಕಿ ಹೆಸರಿಗೆ ತಕ್ಕಂತೆ ಮಾಸ್​​ ಸಿನಿಮಾವಲ್ಲ, ಅಣ್ಣ ತಂಗಿಯ 100 % ಸೆಂಟಿಮೆಂಟ್​ ಇರೋ ಕಥೆ. ತಂಗಿಯನ್ನು ಶತ್ರುಗಳು ಕೆಣಕಿದ್ರೆ ಅಣ್ಣ ಅನೀಶ್​ ಬೆಂಕಿಯಾಗಿತ್ತಾರೆ ಹೊತ್ತಿ ಉರಿಯೋ ಅವನ ಕೋಪಕ್ಕೆ ಯಾರಲ್ಲಾ ಸುಟ್ಟು ಭಸ್ಮ ಆಗ್ತಾರೆ ಅನ್ನೋದೆ ಕಥೆ. ಜೊತೆಜೊತೆಗೆ ಆಪ್ತಮಿತ್ರ ನೆನಪಿಸೋ ಹಾರರ್ ​​ಥ್ರಿಲ್ಲರ್​ ಎಲಿಮೆಂಟ್​​​ ಸೂಪರ್ ಆಗಿದೆ.

ಬೆಂಕಿ ಚಿತ್ರತಂಡದಿಂದ ಸ್ನೀಕ್​ ಪೀಕ್​​ ವೀಡಿಯೋ ರಿಲೀಸ್ ಆಗಿದ್ದು ಹಳೆ ಭೂತ ಬಂಗಲೆಯೊಳೆಗೆ ದೆವ್ವಕ್ಕೆ ಸವಾಲಾಕೋ ಭಯಾನಕ ದೃಶ್ಯಗಳಿವೆ. ಸಿನಿಮಾದಲ್ಲಿ ಮುದ್ದು ,ಮುದ್ದಾಗಿ ಕಾಣೋ ದೆವ್ವ ನಿಮಗೆ ಹೇಗೆ ಭಯ ಹುಟ್ಟಿಸುತ್ತೋ ಅನ್ನೋದೆ ಥ್ರಿಲ್ಲಿಂಗ್​​​. ಇದ್ರ ಜತೆಯಲ್ಲಿ ತಂಗಿ ಓದಿನಲ್ಲಿ ದೊಡ್ಡ ಸಾಧನೆ ಮಾಡಬೇಕು ಅಂತಾ ಕನಸು ಕಂಡಿರೋ ಅಣ್ಣ, ಹೇಗೆ ಅವಳಿಗಾಗಿ ತಾಪತ್ರಯ ತೆಗೆದುಕೊಂಡಿದ್ದಾನೆ ಅನ್ನೋದು ಇನ್ನೂ ಫನ್ನಿಯಾಗಿದೆ. ಅಣ್ಣ ತಂಗಿಯ ಶಿವಣ್ಣ-ರಾಧಿಕಾ ಕಾಂಬಿನೇಷನ್​​ ನೆನಪು ಮಾಡಿದ್ರು ಕೂಡ, ಆ ಸಿನಿಮಾ ಬೀಟ್​ ಮಾಡೋ ಎಲೆಮೆಂಟ್ಸ್​​ ಇರುತ್ತಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಎ.ಆರ್​. ಶಾನ್​ ನಿರ್ದೇಶನದಲ್ಲಿ ಬೆಂಕಿಯ ಜ್ವಾಲೆ ಉಗ್ರವಾಗಿದೆ. ಸಿಲ್ವರ್​ ಸ್ಕ್ರೀನ್​ ಮೇಲೆ ನಿರ್ದೇಶಕನ ಕರಾಮತ್ತು ನೋಡೋಕೆ ಕ್ಷಣಗಣನೆ ಶುರುವಾಗಿದೆ. ರವಿಕುಮಾರ್​, ಶ್ರೀಕಾಂತ್​​, ನಂದೀಶ್​ ಸಹಭಾಗಿತ್ವದ ನಿರ್ಮಾಣದಲ್ಲಿ ಅಧ್ಬುತವಾಗಿ ಸಿನಿಮಾ ಮೂಡಿ ಬಂದಿದೆ. ಹಳ್ಳಿಯ ಸೌಂದರ್ಯಕ್ಕೆ ಇನ್ನಷ್ಟು ರಂಗು ತುಂಬಿದ್ದಾರೆ ಕ್ಯಾಮೆರಾ ಮ್ಯಾನ್​​ ವೀನಸ್​ ನಾಗರಾಜ್​ ಮೂರ್ತಿ. ಆನಂದ ರಾಜ್​​ ವಿಕ್ರಮ್​ ಮ್ಯೂಸಿಕ್​ ಕಂಪೋಸಿಂಗ್​​ ಇಂಪಾಗಿದೆ. ವಿಂಕ್​​ಮ್ಯೂಸಿಕ್​ ಬ್ಯಾನರ್​ ಅಡಿಯಲ್ಲಿ ಮೂಡಿ ಬರ್ತಿರೋ ಬೆಂಕಿ ಚಿತ್ರಕ್ಕೆ ಪವರ್ ಟವಿ ಕಡೆಯಿಂದ ಆಲ್​ ದಿ ಬೆಸ್ಟ್​​​​.

ರಾಕೇಶ್​ ಅರುಂಡಿ, ಫಿಲ್ಮ್​ ಬ್ಯೂರೊ, ಪವಟ್​​ ಟಿವಿ

RELATED ARTICLES

Related Articles

TRENDING ARTICLES