Thursday, December 7, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಈ ಕ್ಷಣರಂಗೇರಲಿದೆ ತ್ರಿವಿಕ್ರಮ ಕ್ರೇಜಿ ಪ್ರೀ ರಿಲೀಸ್ ಇವೆಂಟ್

ರಂಗೇರಲಿದೆ ತ್ರಿವಿಕ್ರಮ ಕ್ರೇಜಿ ಪ್ರೀ ರಿಲೀಸ್ ಇವೆಂಟ್

ಕ್ರೇಜಿಸ್ಟಾರ್​ ಪುತ್ರ ವಿಕ್ರಮ್​ ರವಿಚಂದ್ರನ್​ ಸದ್ಯ ಪ್ರಮೋಷನ್ಸ್​ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ತ್ರಿವಿಕ್ರಮನ ಪರಾಕ್ರಮ ನೋಡೋಕೆ ಫ್ಯಾನ್ಸ್ ​ಕೂಡ ತುದಿಗಾಲಲ್ಲಿ ಕಾಯ್ತಾ ಇದ್ದಾರೆ. ಇತ್ತ ವಿಕ್ರಮ್​ ಟೆಂಪಲ್​ ರನ್​ ಜೊತೆಗೆ ಎಲ್ಲಾ ಕಡೆ ಪ್ರಮೋಷನ್ಸ್ ಮಾಡ್ತಾ ಬ್ಯುಸಿಯಾಗಿಬಿಟ್ಟಿದ್ದಾರೆ. ಇದ್ರ ಜೊತೆಗೆ ತೆರೆಮರೆಯಲ್ಲಿ ತ್ರಿವಿಕ್ರಮ ಚಿತ್ರದ ಅದ್ಧೂರಿ ಪ್ರೀ- ರಿಲೀಸ್​ ಇವೆಂಟ್​ಗೆ ಭರ್ಜರಿ ಸಿದ್ಧತೆ  ನಡೀತಿದೆ.

ರಂಗೇರಲಿದೆ ತ್ರಿವಿಕ್ರಮ ಕ್ರೇಜಿ ಪ್ರೀ- ರಿಲೀಸ್ ಇವೆಂಟ್

ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಜಗಮಗಿಸಲಿರೋ ವೇದಿಕೆ

ಕನಸುಗಾರ ಕ್ರೇಜಿಸ್ಟಾರ್​ ರವಿಚಂದ್ರನ್ ದ್ವಿತೀಯ ​ಪುತ್ರ ವಿಕ್ರಮ್​ ಅಭಿನಯದ ಚೊಚ್ಚಲ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಇದೇ ತಿಂಗಳ ಜೂನ್​ 24ಕ್ಕೆ ತ್ರಿವಿಕ್ರಮ ಚಿತ್ರದ ಭರಾಟೆಗೆ ಪ್ರೇಕ್ಷಕರು ಥ್ರಿಲ್ ಆಗೋದು ಪಕ್ಕಾ ಆಗಿದೆ. ಹೊಸ ಪ್ರಯತ್ನ, ಹೊಸ ಕಥೆಯ ಜೊತೆ ವಿಕ್ರಮ್​​ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಲಿದ್ದಾರೆ. ಈಗಾಗ್ಲೇ ಚಿತ್ರದ ಎಲ್ಲಾ ಹಾಡುಗಳು ಹಿಟ್​ ಮೇಲೆ ಹಿಟ್​ ದಾಖಲಿಸಿ ಕ್ರೇಜ್​ ಹುಟ್ಟಿಸಿವೆ.

ಸದ್ಯ, ತ್ರಿವಿಕ್ರಮ ಚಿತ್ರದ ಹೊಸ ಹಾಡು ಎಲ್ಲೆಲ್ಲೂ ಧೂಳೆಬ್ಬಿಸ್ತಿದೆ. ಕ್ರೇಜಿ ತನಯ, ಶಕುಂತಲಾ ಶೇಕ್​ ಎ ಬಾಡಿ ಪ್ಲೀಜ್​ ಅಂತಾ ಬಿಂದಾಸ್​ ಸ್ಟೆಪ್ಸ್​ ಹಾಕಿದ್ದಾರೆ ವಿಕ್ರಮ್​​. ಈ ಹಾಡಿನ ಗಾನಬಜಾನಕ್ಕೆ ಎಲ್ಲರೂ ಮೈಕೈ ಕುಣಿಸುತ್ತಿದ್ದಾರೆ. ವಿಕ್ರಮ್​ ಜೊತೆ ನಟಿ ಆಕಾಂಕ್ಷಾ ಶರ್ಮಾ ಸೊಂಟ ಬಳುಕಿಸಿರುವ ಪರಿಗೆ ಸಿನಿಪ್ರೇಮಿಗಳು​ ಫಿದಾ ಆಗಿದ್ದಾರೆ.

ಶಾಕುಂತಲಾ ಹಾಡಿಗೆ ಬೃಹತ್​ ಸೆಟ್​ ಹಾಕಿ ಅದ್ಧೂರಿಯಾಗಿ ಚಿತ್ರೀಕರಿಸಲಾಗಿತ್ತು. ಕಲರ್​ಫುಲ್​ ಕಾಸ್ಟ್ಯೂಮ್ಸ್​​ನೊಂದಿಗೆ ಸಖತ್​ ರಿಚ್​ ಆಗಿ ಮೂಡಿ ಬಂದಿರೋ ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಈಗಾಗ್ಲೇ ತ್ರಿವಿಕ್ರಮ ರಿಲೀಸ್​ಗೂ ಮುನ್ನವೇ ನಿರೀಕ್ಷೆಗೂ ಮೀರಿ ಹೈಪ್​ ಕ್ರಿಯೇಟ್​ ಮಾಡಿದೆ. ಸೆಂಚೂರಿ ಸ್ಟಾರ್​ ಶಿವಣ್ಣ ಕೂಡ ಸಿನಿಮಾ ಬಗ್ಗೆ ಎಗ್ಸೈಟಿಂಗ್​ ಸ್ಟೇಟ್​​ಮೆಂಟ್ ನೀಡಿದ್ರು.

ಚಿತ್ರತಂಡ ತುಮಕೂರು, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ​​ನಗರಗಳಲ್ಲಿ ಭರ್ಜರಿ ಪ್ರಮೋಷನ್ಸ್​ ಮಾಡಿದೆ. ಬಳ್ಳಾರಿ, ಹೊಸಪೇಟೆ ಮುಗಿಸಿ ಬೆಂಗಳೂರಿಗೆ ಆಗಮಿಸಲಿರೋ ಚಿತ್ರತಂಡ ಈ ತಿಂಗಳ 19ನೇ ತಾರೀಖಿನಂದು ಪ್ರೀ- ರಿಲೀಸ್​ ಇವೆಂಟ್​​ಗೆ ದೊಡ್ಡ ಸಿದ್ಧತೆ ಮಾಡಿಕೊಂಡಿದೆ. ಈ ಅದ್ಧೂರಿ ಸಮಾರಂಭಕ್ಕೆ  ರವಿಚಂದ್ರನ್​​, ಡಾಲಿ ಧನಂಜಯ, ಧ್ರುವ ಸರ್ಜಾ, ಶರಣ್​​, ಅಜಯ್​ರಾವ್​​, ವಶಿಷ್ಠ ಸಿಂಹ,  ನೀನಾಸಂ ಸತೀಶ್​​ ಆಗಮಿಸಲಿದ್ದಾರೆ.

ತ್ರಿವಿಕ್ರಮ ಚಿತ್ರದಲ್ಲಿ ಸಾಧುಕೋಕಿಲ, ಸುಚೇಂದ್ರ ಪ್ರಸಾದ್​​, ಆದಿಲೋಕೇಶ್​​ ಸೇರಿದಂತೆ ಮುಂತಾದವರ ತಾರಬಳಗವಿದೆ.  ರೋಸ್​, ಮಾಸ್​​ ಲೀಡರ್​​​​ ಖ್ಯಾತಿಯ ಸಹನಾಮೂರ್ತಿ ಆ್ಯಕ್ಷನ್​ ಕಟ್​ ಹೇಳಿದ್ದು, ಸೋಮಣ್ಣ ಟಾಕೀಸ್​ ಬ್ಯಾನರ್​ ಅಡಿಯಲ್ಲಿ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಅರ್ಜುನ್​ ಜನ್ಯಾ ಸಂಗೀತ, ಸಂತೋಷ್​ ರೈ ಪತಾಜೆ ಕ್ಯಾಮೆರಾ ಚಿತ್ರಕ್ಕೆ ಪ್ಲಸ್​ ಆಗಿಲಿದೆ. ಒಟ್ಟಾರೆ ಕನ್ನಡ ಸಿನಿಲೋಕದಲ್ಲಿ ತ್ರಿವಿಕ್ರಮನ ಹೊಸ ಅಧ್ಯಾಯ ಶುರುವಾಗಲಿದೆ.

ರಾಕೇಶ್​​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

Most Popular

Recent Comments