Tuesday, April 23, 2024

‘ಬೆಂಕಿ’ಯಲ್ಲಿ ಅರಳಿದ ಅನೀಶ್ ಅಣ್ಣ- ತಂಗಿ ರೋಚಕತೆ

ಇವನು ಇವತ್ತಲ್ಲ ನಾಳೆ ಆರಿ ಹೋಗೋ  ಬೆಂಕಿಯಲ್ಲ. ಸದಾ ಒಳಗೇ ಬುಸುಗುಟ್ಟೋ  ಬೂದಿ ಮುಚ್ಚಿದ  ಕೆಂಡ. ಕಣ್ಣಿಗೆ ಕಾಣಿಸದಿದ್ರೂ ತನ್ನೊಳಗೆ ತಾನೇ ಉರೀತಾ ಇರ್ತಾನೆ. ಇಷ್ಟೆಲ್ಲಾ ಬಿಲ್ಡಪ್​ ಯಾರಿಗೆ ಅಂತ ಯೋಚನೆ ಮಾಡ್ತಿದ್ದೀರಾ..? ಯೆಸ್​​.. ಹಳ್ಳಿ ಹುಡ್ಗನಾಗಿ ಅನೀಶ್​​ಫೈರ್​​ ಬ್ರಾಂಡ್​ ಆಗಿ ಎಂಟ್ರಿ ಕೊಡ್ತಿದ್ದಾರೆ. ಸದ್ಯ, ಎಲ್ಲೆಲ್ಲೂ ಬೆಂಕಿ ಚಿತ್ರದ ಟ್ರೈಲರ್​ ಬಗ್ಗೆಯೇ ಟಾಕು. ಹಾಗಿದ್ರೆ ಅನೀಶ್​​ ಟೆಂಪರೇಚರ್​  ಹೇಗಿದೆ ಗೊತ್ತಾ..?

‘ಬೆಂಕಿ’ಯಲ್ಲಿ ಅರಳಿದ ಅನೀಶ್ ಅಣ್ಣ- ತಂಗಿ ರೋಚಕತೆ

ಹಳ್ಳಿ ಹುಡುಗನ ಬೆಂಕಿ ಗೆಟಪ್​​.. ಹಾರರ್ ಕಾಮಿಡಿ ಥ್ರಿಲ್ಲರ್​​​

ಶಿವಣ್ಣ- ರಾಧಿಕಾ ಕಾಂಬೋನ​​ ಬೀಟ್​ ಮಾಡುತ್ತಾ ಬೆಂಕಿ..?

ಅಣ್ಣ – ತಂಗಿ ಸೆಂಟಿಮೆಂಟ್​ ಜೊತೆಗೆ ಮಸ್ತ್​ ಕಾಮಿಡಿ ಕಿಕ್ಕು

ಸಿನಿಲೋಕದಲ್ಲಿ ತವರಿಗೆ ಬಾ ತಂಗಿ, ಅಣ್ಣ ತಂಗಿ ಸಿನಿಮಾಗಳು ಹೊಸ ಟ್ರೆಂಡ್​ ಸೆಟ್​ ಮಾಡಿದ್ದು ಗೊತ್ತೇ ಇದೆ. ಹೊಸ ದಾಖಲೆ ಬರೆದ ಈ ಚಿತ್ರದಲ್ಲಿ ಅಣ್ಣ ತಂಗಿಯ ಸಂಬಂಧವನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗಿತ್ತು. ಅದೇ ರೀತಿ ಪಕ್ಕಾ ಹಳ್ಳಿಯ ಗೆಟಪ್​​ನಲ್ಲಿ ಬೆಂಕಿ ಅವತಾರದಲ್ಲಿ ನಟ ಅನೀಶ್​​ ಗ್ರ್ಯಾಂಡ್​ ಎಂಟ್ರಿ ಕೊಡ್ತಿದ್ದಾರೆ.

ಹೊಸತನದ ಕಥೆ, ಹೊಸ ಬಗೆಯ ಸಬ್ಜೆಕ್ಟ್​​, ವಿಭಿನ್ನವಾದ ಹಳ್ಳಿ ಸೊಗಡಿನ ಲಾಂಗ್ವೇಜ್​​ ಇರೋ ಸಿನಿಮಾ ಇದು. ಚಿತ್ರದ ಟೈಟಲ್​​ ಬೆಂಕಿ ಸಖತ್​ ಇಂಟರೆಸ್ಟಿಂಗ್​ ಆಗಿದೆ. ಈಗಾಗ್ಲೇ ಬೆಂಕಿ ಚಿತ್ರದ ಟೀಸರ್​ ನೋಡಿದವ್ರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ರು. ಅನೀಶ್​​ ಆ್ಯಕ್ಟಿಂಗ್​ಗೆ, ಆ್ಯಕ್ಷನ್​ಗೆ, ತಂಗಿಯ ಜೊತೆಗಿನ ಪ್ರೀತಿಯ ಬಾಂಧವ್ಯದ ಬಗ್ಗೆ ಇಂಪ್ರೆಸ್​ ಆಗಿದ್ರು. ಇದೀಗ ಟ್ರೈಲರ್​ ಕೂಡ ಬೆಂಕಿ ಬಿರುಗಾಳಿ ಎಬ್ಬಿಸಿದೆ. ಪಕ್ಕಾ ಪ್ರಾಮಿಸಿಂಗ್​ ಸಿನಿಮಾ ಇದು ಅಂತ ಕಮೆಂಟ್ಸ್​ ಮಾಡ್ತಿದ್ದಾರೆ.

ರಾಮಾರ್ಜುನ ಚಿತ್ರದಲ್ಲಿ ಮಿಂಚಿದ್ದ ಅನೀಶ್​ ತೇಜೇಶ್ವರ್​ ಒಂದೊಳ್ಳೆ ಕಥೆಗಾಗಿ ಕಾಯ್ತಾ ಇದ್ರು. ಹಳ್ಳಿಯ ಬ್ಯಾಕ್​ ಡ್ರಾಪ್​​ ಕಥೆಯ ಜೊತೆ ಸಬ್ಜೆಕ್ಟ್​ ಸಖತ್​ ಥ್ರಿಲ್ಲಿಂಗ್​ ಆಗಿರೋದ್ರಿಂದ ಥಟ್​ ಅಂತಾ ಓಕೆ ಮಾಡಿದ್ದಾರೆ.​. ಶಿವಣ್ಣ- ರಾಧಿಕಾ ಕಾಂಬಿನೇಷನ್​ ಬ್ರೇಕಪ್​ ಮಾಡೋದು ತುಂಬಾ ಕಷ್ಟ. ಆದ್ರೂ, ಕಥೆ ಕೇಳಿ ಸಖತ್​ ತಯಾರಿ ಮಾಡ್ಕೊಂಡು ಸಿಲ್ವರ್​ ಸ್ಕ್ರೀನ್​ ಮೇಲೆ ಮಿಂಚೋಕೆ ಸಜ್ಜಾಗಿದ್ದಾರೆ.

ಸಾದಾ ಸೀದ ಹಳ್ಳಿ ಹೈದನಾಗಿ, ತಂಗಿಗೆ ತಕ್ಕ ಅಣ್ಣನಾಗಿ ಕಾಣಿಸಿರೋ ಅನೀಶ್​​ಗೆ ನಾಯಕಿಯಾಗಿ ರೈಡರ್​ ಖ್ಯಾತಿಯ ಸಂಪದ ಅಭಿನಯಿಸಿದ್ದಾರೆ. ತಂಗಿಯಾಗಿ ಕಾಣಿಸಿರುವ  ಶ್ರುತಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್​ನಲ್ಲಿ ಅನೀಶ್​​ಗೆ ತಂಗಿ ಮೇಲಿರುವ ಪ್ರೀತಿ ಎದ್ದು ಕಾಣುತ್ತದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ತಂಗಿಯನ್ನು ಕೆಣಕಿದ್ರೆ ಬೆಂಕಿಯಂತೆ ಕೆಂಡಾಮಂಡಲವಾಗೋ ಅನೀಶ್​ ಅವತಾರ ನೋಡೋಕೆ ಜುಲೈ 15ರವರೆಗೂ ಕಾಯಬೇಕು.

ಇತ್ತೀಚೆಗೆ ಈ ರೀತಿಯ ಹೊಸ ಪ್ರಯತ್ನಗಳು ತುಂಬಾ ಕಡಿಮೆ. ಹಾಗಾಗಿ ಬೆಂಕಿ ಚಿತ್ರದ ಮೇಲೆ ನಿರೀಕ್ಷೆಗಳು ಡಬಲ್ ಆಗಿವೆ. ಹಿರಿಯ ನಿರ್ದೇಶಕ ಎರ್ ಬಾಬು ಅವ್ರ ಮಗ ಎಆರ್​ ಶಾನ್​ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಬೆಂಕಿ ಚಿತ್ರಕ್ಕೆ ಕೆ.ವಿ ರವಿಕುಮಾರ್​, ಶ್ರೀಕಾಂತ್​ ಪಿ ಬಂಡವಾಳ ಹೂಡಿದ್ದಾರೆ. ಆನಂದ್​ ರಾಜ್​ ವಿಕ್ರಮ್​ ಸಂಗೀತ ಕೇಳಲು ಇಂಪಾಗಿರಲಿದೆ.ವೀನಸ್ ನಾಗರಾಜ್​ ಮೂರ್ತಿ ಕ್ಯಾಮೆರಾ ಕಣ್ಣಲ್ಲಿ ಹಳ್ಳಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಎನಿವೇ​​, ಪ್ರೇಕ್ಷಕರಿಗೆ ಬೆಂಕಿ ಸಿನಿಮಾದ ತಾಪ ತಟ್ಟಬೇಕು ಅಂದ್ರೆ, ಜುಲೈ 15ರವರೆಗೂ ಕಾಯಲೇಬೇಕು.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES