Thursday, March 28, 2024

ಜಾನಪದ ಹಾಡಿಗೆ ಡ್ಯಾನ್ಸ್​​ಮಾಡಿದ ಆರ್.ಅಶೋಕ್ ಹಾಗೂ ಪ್ರಭು ಚೌಹಾಣ್

ಬೀದರ್:  ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಎಂದು ಬೀದರ್​ನ ಔರಾದ್ ತಾಲೂಕಿನ ವಡಗಾಂವ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ್ ಮತ್ತು ಸಚಿವ ಪ್ರಭು ಚೌಹಾನ್​ ಭೇಟಿ ನೀಡಿದ್ದಾರೆ. ಅಲ್ಲದೇ ದಲಿತರ ಮನೆಯಲ್ಲಿ ತಿಂಡಿ ಸೇವನೆ ಮಾಡಿ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮಕ್ಕಳ ಜೊತೆಗೆ ಕೋಲಾಟವಾಡಿ ಜನರನ್ನ ರಂಜಿಸಿದ್ದಾರೆ.

ಅಷ್ಟೇಅಲ್ಲದೇ ಇಂದು ಟ್ವಿಟರ್​​ ಅಧಿಕೃತ ಖಾತೆಯಲ್ಲಿ ಬಿಬಾ ನಾಯಕ ತಾಂಡಾಕ್ಕೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಮಾತು ಕತೆ ನಡೆಸಿ, ಜಾನಪದ ಹಾಡಿಗೆ ನರ್ತಿಸಿರುವ ಕ್ಷಣವನ್ನು ಪೋಸ್ಟ್​ ಮಾಡಿದ್ದಾರೆ. ಹಾಗೂ ಅಲ್ಲಿನ ಜನತೆಯ ಮುಗ್ಧತೆ, ಪ್ರೀತಿ, ಗೌರವವನ್ನು ಹೊಗಳಿದ್ದಾರೆ.

RELATED ARTICLES

Related Articles

TRENDING ARTICLES