ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಈಗ ಒಡೆದ ಮನೆಯಂತಾಗಿದೆ. ಒಂದಷ್ಟು ಬಣ ವಲಸೆರಾಮಯ್ಯ ಅವರಿಗೆ ಜೈಕಾರ ಹಾಕುತ್ತಿದ್ದರೆ, ಭ್ರಷ್ಟಾಧ್ಯಕ್ಷ ಡಿಕೆಶಿ ಮಾತ್ರ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟ್ವಿಟ್ ಮಾಡುವ ಮೂಲಕ ಕೆಣಕುತ್ತಿದ್ದಾರೆ.
ಸಿದ್ದರಾಮಯ್ಯ ಬಣ ಅವರಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲವೇಕೆ? ಮಹಡಿ ಹತ್ತಲು ಆಗದವರು, ಬೆಟ್ಟ ಹತ್ತುವ ಕನಸು ಕಂಡರಂತೆ! ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ ಬಿಟ್ಟಿದೆ. ತಮ್ಮ ಬೆಂಬಲಿಗರ ಮೂಲಕ ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳುವ ಬುರುಡೆರಾಮಯ್ಯ ಅವರು ಈಗ ಚುನಾವಣೆ ನಡೆದರೂ ಬಾದಾಮಿಯಲ್ಲಿ ಸೋಲುವುದು ಖಚಿತ, ಇದು ವಾಸ್ತವ ಎಂದಿದ್ದಾರೆ.
ಒಂದೆಡೆ ಶಾಸಕರ ಅಭಿಪ್ರಾಯ ತೆಗೆದುಕೊಂಡು, ಹೈಕಮಾಂಡ್ ಸಿಎಂ ಅಭ್ಯರ್ಥಿ ಘೋಷಣೆ ಮಾಡುತ್ತದೆ ಎಂದು ಹೇಳುವ ಅವರು ಮತ್ತೊಂದೆಡೆ ಬೆಂಬಲಿಗರ ಮೂಲಕ ʼಮುಂದಿನ ಸಿಎಂ ಸಿದ್ದರಾಮಯ್ಯʼ ಎಂದು ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ, ಅವರು ಸಿಎಂ ಆಗುವುದೂ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ.
ಮಹಡಿ ಹತ್ತಲು ಆಗದವರು, ಬೆಟ್ಟ ಹತ್ತುವ ಕನಸು ಕಂಡರಂತೆ!
ತಮ್ಮ ಬೆಂಬಲಿಗರ ಮೂಲಕ ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳುವ #ಬುರುಡೆರಾಮಯ್ಯ ಅವರು ಈಗ ಚುನಾವಣೆ ನಡೆದರೂ ಬಾದಾಮಿಯಲ್ಲಿ ಸೋಲುವುದು ಖಚಿತ, ಇದು ವಾಸ್ತವ.
ಸಿದ್ದರಾಮಯ್ಯ ಸಿಎಂ ಆಗುವುದೂ ಇಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ.#ಕಾಂಗ್ರೆಸ್ಕಲಹ pic.twitter.com/9zPyjNBAMe
— BJP Karnataka (@BJP4Karnataka) May 5, 2022
ಕರ್ನಾಟಕ ಕಾಂಗ್ರೆಸ್ ಈಗ ಒಡೆದ ಮನೆಯಂತಾಗಿದೆ.
ಒಂದಷ್ಟು ಬಣ #ವಲಸೆರಾಮಯ್ಯ ಅವರಿಗೆ ಜೈಕಾರ ಹಾಕುತ್ತಿದ್ದರೆ, #ಭ್ರಷ್ಟಾಧ್ಯಕ್ಷ ಡಿಕೆಶಿ ಮಾತ್ರ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯ ಬಣ @DKShivakumar ಅವರಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲವೇಕೆ?#ಕಾಂಗ್ರೆಸ್ಕಲಹ pic.twitter.com/wqjHlgGFv1
— BJP Karnataka (@BJP4Karnataka) May 5, 2022