Saturday, July 6, 2024

ಜೇಮ್ಸ್​ ಚಿತ್ರ ವಿರೋಧಿಗಳಿಗೆ ವಾಟಾಳ್​ ನಾಗರಾಜ್​ ಎಚ್ಚರಿಕೆ

ಬೆಂಗಳೂರು: ಪುನೀತ್​ ರಾಜಕುಮಾರ್​ ಅಭಿಯದ ಕೊನೆ ಚಿತ್ರ ಜೇಮ್ಸ್​​ ಚಿತ್ರಮಂದಿರದಿಂದ ತೆಗೆಯುವ ಹುನ್ನಾರಕ್ಕೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ತ್ರಿವೇಣಿ ಚಿತ್ರಮಂದಿರ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಕನ್ನಡ ಪರ ಹೋರಾಟಗಾರರ ವಾಟಾಳ್ ನಾಗರಾಜ್ ನೇತೃತ್ವದ ಪ್ರತಿಭಟನೆ ನೇತೃತ್ವವಹಿಸಿದ್ದು, ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಜೇಮ್ಸ್ ಸಿನಿಮಾ ತೆಗಿಬಾರದು, ತೆಗಿಬೇಕು ಅನ್ನೋದೇ ಅಕ್ಷಮ್ಯ ಅಪರಾಧ. ಚಿತ್ರ ತೆಗೆದರೆ ಕರ್ನಾಟಕದಲ್ಲಿ ಕಂಡರಿಯದ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಪರಭಾಷಾ ಚಿತ್ರಗಳು ಕನ್ನಡನಾಡಲ್ಲಿ ಬೇಡ. ಆರ್​ಆರ್​ಆರ್​ ತೆಲುಗು ಚಿಕ್ಕಬಳ್ಳಾಪುರದಲ್ಲಿ ಏನು ವೈಭವದಿಂದ ಮಾಡಿದ್ರೂ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮಾತ್ರ ಆದ್ಯತೆ ಕೊಡಿ. ಮೊದಲು ಹಿಮಾಲಯ ಟಾಕೀಸ್ ಇತ್ತು. ಆಗ ರಾಜ್​ಕುಮಾರ್​ ರಣಧೀರ ಕಂಠೀರವ ಚಿತ್ರಕ್ಕೆ ಥಿಯೇಟರ್ ಇರಲಿಲ್ಲ, ನಾನು ಹೋರಾಟ ಮಾಡಿ ಥಿಯೇಟರ್ ಕೊಟ್ಟೆ ಎಂದು ಹಳೆ ಘಟನೆ ನೆನೆದರು.

ಅದುವಲ್ಲದೇ, ಈ ಹಿಂದೆ ಬಂಗಾರದ ಮನುಷ್ಯ ಸಿನಿಮಾ ತೆಗೆಯಲು ಹುನಾರ ಮಾಡಿದ್ರು. ಆಗಲೂ ನಾನು ಹೋರಾಟ ಮಾಡಿದ್ದೇನೆ. ಇವತ್ತು ಜೇಮ್ಸ್ ಸಿನಿಮಾ ತೆಗೆಯೋ ಹಿಂದೆ ಭಾರೀ ಪಿತೂರಿ ಇದೆ. ಈಗ ಕೂಡ ಹೋರಾಟ ಮಾಡುತ್ತೇವೆ ಎಂದು ಜೇಮ್ಸ್​ ಸಿನಿಮಾ ತೆಗೆಯುವವರಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES