Thursday, March 28, 2024

ಯುಪಿ ಶೇಖ್​ಪುರ್ ಅಭ್ಯರ್ಥಿ ಫರಾಹ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

ಬದೌನ್ (ಉತ್ತರ ಪ್ರದೇಶ): ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಓಂಕಾರ್​ ಸಿಂಗ್ ಮಾಡಿದ ಅಸಭ್ಯ ಪದಬಳಕೆಯಿಂದ ಮನನೊಂದು ಬದೌನ್ ಜಿಲ್ಲೆಯ ಶೇಖಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಫರಾಹ್ ನಯೀಮ್ ಅವರು ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಇದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ವಾರಗಳು ಬಾಕಿ ಇರುವಾಗ ಕಾಂಗ್ರೆಸ್ ಪಕ್ಷಕ್ಕೆ ಉಂಟಾದ ಭಾರಿ ಹಿನ್ನಡೆ ಎನ್ನಲಾಗಿದೆ. ‘ಮಹಿಳೆಯರ ಹಕ್ಕನ್ನು ಗೌರವದಿಂದ ಕಾಣುವ ಪ್ರಿಯಾಂಕಾ ಗಾಂಧಿಯವರಿಂದ ನಯೀಮ್ ಪಕ್ಷದಲ್ಲಿದ್ದೆ, ಆದರೆ ಓಂಕಾರ್ ಅಂಥವರಿಂದ ಪಕ್ಷ ತೊರೆಯಬೇಕಾಯಿತು’ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES