Tuesday, December 5, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಇದು ಜಮೀರ್ ಅಹ್ಮದ್ ಸರ್ಕಾರವಲ್ಲ : ಬಸವರಾಜ್ ಬೊಮ್ಮಾಯಿ

ಇದು ಜಮೀರ್ ಅಹ್ಮದ್ ಸರ್ಕಾರವಲ್ಲ : ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಪಾದರಾಯನಪುರ ಗಲಭೆ ಬಗ್ಗೆ ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳು ಯಾವಾಗ ಬರಬೇಕು ಎಂಬುದನ್ನು ಜಮೀರ್ ಅಹ್ಮದ್ ಅವರೊಂದಿಗೆ ಕೇಳಿ ಮಾಡಬೇಕಿಲ್ಲ ಎಂದು ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿರುವ ಅವರು, ‘ಇದು ಶಾಸಕರು ಜಮೀರ್ ಅಹ್ಮದ್​ ಅವರ ಸರ್ಕಾರವಲ್ಲ. ಅಧಿಕಾರಿಗಳಿಗೆ ಯಾವಾಗ ಬರಬೇಕು? ಯಾವಾಗ ಹೋಗಬೇಕು ಎಂಬುದನ್ನು ಜಮೀರ್ ಅವರನ್ನು ಕೇಳಿ ಮಾಡಬೇಕಿಲ್ಲ. ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ. ಈಗ ಬಂಧಿಸಿರುವವರ ಜೊತೆ ಮತ್ತೊಂದಿಷ್ಟು ಆರೋಪಿಗಳನ್ನು ಬಂಧಿಸಲಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ‘ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments