Monday, May 20, 2024

ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲು ಕೊರೋನಾ ಸಂಕಷ್ಟವನ್ನು ಬಳಸಿಕೊಳ್ಳುತ್ತಿದೆಯಾ? : ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಮಹಾಮಾರಿ ಕೊರೋನಾ ವಿರುದ್ಧ ದೇಶದ ಜನರನ್ನುಒಗ್ಗೂಡಿಸುವ ಸಲುವಾಗಿ ದೀಪ ಹಚ್ಚೋಣ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ. ಆದರೆ ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ  ಅನುಮಾನ ವ್ಯಕ್ತಪಡಿಸಿದ್ದು, ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸುತ್ತೆದೆಯಾ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 1980 ಎಪ್ರಿಲ್ 6 ರಂದು ಬಿಜೆಪಿಯ ಸಂಸ್ಥಾಪನಾ ದಿನ. ಬಿಜೆಪಿ ಸಂಸ್ತಾಪನೆಗೊಂಡು ಇಂದಿಗೆ 40 ವರ್ಷ ತುಂಬುತ್ತದೆ. ಹಾಗಾಗಿ ನರೇಂದ್ರ ಮೋದಿ ಈ ಕೊರೋನಾ ಸಂಕಷ್ಟವನ್ನು ಸಂಸ್ಥಾಪನಾ ದಿನ ಆಚರಿಸಲು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ?‘ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕೊರೋನಾ ಸಂಕಷ್ಟದ ದಿನದಲ್ಲಿ ಬಿಜೆಪಿ ತನ್ನ ಸಂಸ್ಥಾಪನಾ ಸಂಭ್ರಮವನ್ನು ನೇರವಾಗಿ ಆಚರಿಸಲು ಹಿಂಜರಿದು, ದೇಶದ ಜನತೆಯ ಕೈಯಲ್ಲಿ ದೀಪ ಉರಿಸಿ ಆಚರಿಸಲು ಮುಂದಾಗಿರುವ ಬಿಜೆಪಿ ತನ್ನ ಭಂಡತನವನ್ನು ಮೆರೆಯುತ್ತಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ದೀಪ ಬೆಳಗಿಸುವ ಪ್ರಧಾನಿ ಕರೆ ಹಿಂದಿನ ವೈಜ್ಞಾನಿಕ ಕಾರಣ ಏನೆಂದು ಅವರೇ ಸ್ಪಷ್ಟಪಡಿಸಬೇಕು. ಈ ಕಷ್ಟದ ದಿನಗಳಲ್ಲಿ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಇಂತಹ ತೋರಿಕೆಯ ಸಂಭ್ರಮ ಬೇಕೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

RELATED ARTICLES

Related Articles

TRENDING ARTICLES