Friday, March 29, 2024

ಹೊಸ ಪಕ್ಷ ಕಟ್ಟಲು ಮುಂದಾದ ನಟ ರಜನಿಕಾಂತ್…!

ಚೆನ್ನೈ: ಕಾಲಿವುಡ್ ನಟ ರಜನಿಕಾಂತ್ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಪಕ್ಷದ ಹೆಸ್ರನ್ನು ತಿಳಿಸದ ಅವರು, “ಈಗಿರುವ ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಮತಕ್ಕಾಗಿ ಜನರ ಹತ್ತಿರ ಹೋಗುತ್ತವೆ. ಸರ್ಕಾರದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ .ನಮ್ಮ ಹೊಸ ಪಕ್ಷದ ಮೂಲಕ ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ” ಎಂದಿದ್ದಾರೆ. 

ಚೆನ್ನೈ ನ ಖಾಸಗಿ ಹೋಟೇಲ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು,‘ನಾನು ಸಿಎಂ ಆಗುವ ಕನಸು ಕಂಡಿಲ್ಲ. ಆದರೆ ಪಕ್ಷದ ಮುಖ್ಯಸ್ಥನಾಗಿರುತ್ತೇನೆ. ಇನ್ನು ನನ್ನ ರಾಜಕೀಯ ಊಹಾಪೋಹದ ಬಗ್ಗೆ ಕಳೆದ 15 ವರ್ಷಗಳಿಂದ ಸುದ್ಧಿ ಹಬ್ಬುತ್ತಲೇ ಇದೆ. 1996 ರಿಂದಲೂ ನನ್ನ ಹೆಸರು ರಾಜಕೀಯದ ಜೊತೆ ನಂಟಾಗಿತ್ತು. 2017ರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಉಹಾಪೋಹ ಹರಡಿತ್ತು‘ ಎಂದು ಹೇಳಿದರು.  

ರಾಜ್ಯದಲ್ಲಿ ಜಯಲಲಿತಾ ಬಳಿಕ ಪ್ರಬಲ ನಾಯಕತ್ವದ ಕೊರತೆಯಿದೆ. ರಾಜಕೀಯದಲ್ಲಿ ವಯಸ್ಸಾದವರೆ ಹೆಚ್ಚಿದ್ದು, ಇನ್ನುಮುಂದೆ  ರಾಜಕೀಯದಲ್ಲಿ ಯುವಜನತೆ ಹೆಚ್ಚಾಗಿ ತೊಡಗಿಕೊಳ್ಳಬೇಕು. ಹಾಗಾಗಿ ನನ್ನ ಪಕ್ಷದಲ್ಲಿ ಶೇ. 60-65 ರಷ್ಟು ಯುವಜನತೆಗೆ ಅವಕಾಶವನ್ನು ನೀಡುತ್ತೇನೆ. ಅಲ್ಲದೆ ನಿವೃತ ಐಪಿಎಸ್, ಐಎಎಸ್ ಅಧಿಕಾರಿಗಳಿಗೆ ಪಕ್ಷಕ್ಕೆ ಆಹ್ವಾನ ನೀಡಿ ಪಕ್ಷವನ್ನು ಬಲಿಷ್ಠಗೊಳಿಸುತ್ತೇನೆ. ನನ್ನ ಪಕ್ಷದಲ್ಲಿ ಅನಗತ್ಯವಾಗಿ ಸಂಪನ್ಮೂಲಗಳಿಗೆ ಖರ್ಚು ಮಾಡುವುದಿಲ್ಲ, ಕೆಲಸ ಮಾಡದವರಿಗೆ ನನ್ನ ಪಕ್ಷದಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು. ಇನ್ನು ಶೀಘ್ರದಲ್ಲೇ  ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸುವುದಾಗಿಯೂ ಹೇಳಿದ್ದಾರೆ. 

RELATED ARTICLES

Related Articles

TRENDING ARTICLES