Tuesday, April 23, 2024

BJPಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ – ಲೆಟರ್​​ ‘ಬಾಂಬ್​’ ಸ್ಫೋಟ!

ಬೆಂಗಳೂರು:  ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ, ಸರ್ಕಾರದ ಎಲ್ಲಾ ಕೆಲಸಗಳಲ್ಲಿ  ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅನಾಮಧೇಯ ಪತ್ರವೊಂದು ಬಿಡುಗಡೆಯಾಗಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿದೆ.

ಕೆಲವಾರು ಇಲಾಖೆಗಳಲ್ಲಿ ತನ್ನ ಸಂಗಡಿಗರೊಂದಿಗೆ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿ.ವೈ ವಿಜಯೇಂದ್ರ ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪ  ನಡೆಸುತ್ತಿದ್ದಾರೆ . ಭಾರೀ ಪ್ರಮಾಣದಲ್ಲಿ ಅಧಿಕಾರದ ದುರುಪಯೋಗವನ್ನು ಪಡೆಸಿಕೊಂಡಿರುವ ಬಿವೈ ವಿಯಯೇಂದ್ರ ಕೋಟ್ಯಂತರ ರೂಪಾಯಿಗಳಷ್ಟು ಅಕ್ರಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಪತ್ರದಲ್ಲೇನಿದೆ?

ಪಾರ್ಟಿ ವಿಥ್​ ಡಿಫರೆನ್ಸ್​ ಎಂಬ ಧ್ಯೇಯಕ್ಕೆ ಬದ್ಧರಾಗಿರುವ ಭಾರತೀಯ ಜನತಾ ಪಕ್ಷದಲ್ಲಿ ಕುಟುಂಬ ರಾಜಕಾರಣ ಹಾಗೂ ವಂಶ ಪಾರಂಪರ್ಯ  ಆಡಳೀತ ಮೇಳೈಸುತ್ತಿದೆ.  ಅನುವಂಶಿಯ ಆಡಳಿತಕ್ಕೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರೇ ಒತ್ತಾಸೆಯಾಗಿ ನಿಂತಿದ್ದಾರೆ. ದೆಹಲಿಯ ಬಿಜೆಪಿ ವರಿಷ್ಠರಿಗೆ ತನ್ನ ಮಗನ ಬಗ್ಗೆ ಒಲವಿದೆ. ಆತ ಪಕ್ಷ ಸಂಘಟನೆಗೆ ಪ್ರವಾಸ ಮಾಡುವುದನ್ನು ನೋಡಿ ವರಿಷ್ಠರು ಸಂತಸಗೊಂಡಿದ್ದಾರೆ ಎಂದು  ಮಗನ ಬಗ್ಗೆ ಸ್ವತಃ ತಂದೆಯೇ ಮೆಚ್ಚುಗೆ ವ್ಯಕ್ತಪಡಿಸಿರುವುದು ದುರಾದೃಷ್ಟಕರ ಸಂಗತಿ.

ಒಂದು ಕಾಲದಲ್ಲಿ ದೇವೇಗೌಡ ಹಾಗೂ ಅವರ ಪುತ್ರ ವ್ಯಾಮೋಹದ ಕುರಿತು ಅವರಿಗೆ ಪಾಠ ಕಲಿಸುತ್ತೇನೆ ಎಂದು  ಘರ್ಜಿಸುತ್ತಿದ್ದ “ರಾಜಾಹುಲಿ” ಇಂದು ಅಧಿಕಾರವನ್ನು ಪುತ್ರ ಪುತ್ರಿಯರಿಗ ವರ್ಗಾವಣೆ ಮಾಡುವ ಮೂಲಕ ದೃತರಾಷ್ಟ್ರ ಪ್ರೇಮವನ್ನು ತೋರಿಸುವ ಮೂಲಕ ದೇವೇಗೌಡರನ್ನೇ ಮೀರಿಸಿದ್ದಾರೆ, ತನ್ನದೇ ಕೂಟವನ್ನು ರಚಿಸಿರುವ ಬಿ ವೈ ವಿಜಯೇಂದ್ರ ಸೂಪರ್​ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವುದು ದುರಾದೃಷ್ಟಕರ.

ಒಂದು ವ್ಯೂಹ ರಚಿಸಿ ಕಾರ್ಪೋರೇಟ್​ ಶೈಲಿಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ವಿಜಯೇಂದ್ರ ನಾನೇ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ. ತಂದೆ ಮಕ್ಕಳ ಭ್ರಷ್ಟಾಚಾರದಿಂದ ಮತದಾರರಾದ ನಾವು ತಲೆತಗ್ಗಿಸುವಂತಾಗಿದೆ ಎಂದರು. ಸ್ವಾಭಿಮಾನವೇ ಮೂಲಮಂತ್ರವಾಗಿರುವ ಬಿಜೆಪಿಯ ಶಾಸಕರಾದ ನಾವುಗಳು ಸಿಎಂ ಪುತ್ರನ ಮುಂದೆ ಅಂಗಲಾಚುವುದು ನಾಚಿಗೇಡಿನ ಸಂಗತಿ. ಮುಖ್ಯಮಂತ್ರಿ ಸ್ಥಾನದ ಶಾಸನಬದ್ಧ ಅಧಿಕಾರವನ್ನು ಸಿಎಂ ಪುತ್ರ ಚಲಾಯಿಸುತ್ತಿರುವುದು ನಮಗೆ ಮತ್ತು ಮತ್ತು ಪಕ್ಷಕ್ಕೆ ಮಾಡುವ ಅವಮಾನ ಎಂದು ದೂರಲಾಗಿದೆ.

ಇನ್ನು ಈ ಪತ್ರವನ್ನು ಯಾರು ಬರೆದಿದ್ದಾರೆ ಮತ್ತು ಯಾಕೆ ಬರೆದಿದ್ದಾರೆ ಎನ್ನುವುದೇ ಒಂದು ಪ್ರಶ್ನೆಯಾಗಿದೆ. ಇದೇ ಪತ್ರದಲ್ಲಿ ಬಿ.ವೈ ವಿಜಯೇಂದ್ರ ಮತ್ತು ಅವರ ಸಂಗಡಿಗರ ಸಂಪೂರ್ಣ ವಿವರವನ್ನೂ, ಅವರ ಮೊಬೈಲ್​ ಸಂಖ್ಯೆಯನ್ನೂ ನಮೂದಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

RELATED ARTICLES

Related Articles

TRENDING ARTICLES