ಬೆಂಗಳೂರು : ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ‘ಅರ್ಹ’ ಶಾಸಕರಿಗೆ ಕೊನೆಗೂ ಮಂತ್ರಿಗಿರಿ ಸಿಕ್ಕಿದೆ. 10 ಮಂದಿ ನೂತನ ಸಚಿವರು ರಾಜಭವನದಲ್ಲಿಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎಸ್.ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಡಾ.ಕೆ ಸುಧಾಕರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್, ಗೋಪಾಲಯ್ಯ, ನಾರಾಯಣ ಗೌಡ, ಶ್ರೀಮಂತ ಪಾಟೀಲ್ ಬಿ.ಎಸ್ ಯಡಿಯೂರಪ್ಪ ಸಂಪುಟ ಸೇರಿದ ನೂತನ ಸಚಿವರು. ಇವರಿಗೆ ರಾಜ್ಯಪಾಲ ವಜುಭಾಯ್ ವಾಲಾ ಪ್ರಮಾಣ ವಚನ ಬೋಧಿಸಿದರು.
ಕೊನೆಗೂ ನೂತನ ಸಚಿವರಿಂದ ಪ್ರಮಾಣವಚನ – ಯಡಿಯೂರಪ್ಪ ಸಂಪುಟ ಸೇರಿದ ಹೊಸ ಸಚಿವರು ಯಾರ್ಯಾರು?
TRENDING ARTICLES