Saturday, April 27, 2024

ಕಾರ್ನಾಡ್​ ಅಗಲಿಕೆಗೆ ಮೋದಿ ಸಂತಾಪ

ಬೆಂಗಳೂರು: ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್​ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಕಾರ್ನಾಡ್​ ಅಗಲಿಕೆಗೆ ಸಂತಾಪ ಸೂಚಿಸಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ. “ಮಾಧ್ಯಮಗಳಲ್ಲಿ ತಮ್ಮ ಬಹುಮಖ ನಟನೆಯಿಂದ ಗಿರೀಶ್ ಕಾರ್ನಾಡ್​ ಎಲ್ಲರ ನೆನಪುಗಳಲ್ಲಿ ಉಳಿಯಲಿದ್ದಾರೆ. ತಮ್ಮ ನೆಚ್ಚಿನ ವಿಚಾರಗಳ ಬಗ್ಗೆ ಅವರು ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾರೆ. ಮುಂದಿನ ವರ್ಷಗಳಲ್ಲಿ ಅವರ ಕೃತಿ, ರಚನೆಗಳು ಇನ್ನಷ್ಟು ಜನಪ್ರಿಯವಾಗಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಅಂತ ಟ್ವೀಟ್ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES