Sunday, October 27, 2024

ನಿಖಿಲ್ ಕುಮಾರಸ್ವಾಮಿ ಬಗ್ಗೆ ಎಸ್.ಎಂ ಕೃಷ್ಣ ಹೀಗಂದ್ರಾ..!?

ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ನಟ ನಿಖಿಲ್ ಕುಮಾರಸ್ವಾಮಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಹಾಗೂ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ‘ಅಮರ್​’ಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದರು. ನಿಖಿಲ್ ನಡೆಯನ್ನು ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಪ್ರಶಂಸಿಸಿದ್ದಾರೆ.
‘’ನಿಖಿಲ್ ನಿಮ್ಮ ಸ್ಟೇಟ್ಮೆಂಟ್ ನಿಂದ ನಾನು ಪ್ರಭಾವಿತನಾಗಿದ್ದೇನೆ, ನಿಮ್ಮ ಮಾತು ಪ್ರಬುದ್ಧತೆಯಿಂದ ಕೂಡಿದೆ, ರಾಜಕೀಯದಲ್ಲಿ ಚುನಾವಣೆಗಳು ಬಂದು ಹೋಗುತ್ತವೆ ಬದುಕು ರಾಜಕಾರಣಕ್ಕಿಂತಲೂ ದೊಡ್ಡದು. ಇದೇ ರೀತಿ ಮುಂದುವರೆದ್ರೆ ಖಂಡಿತ ಜಯ ನಿಮ್ಮದಾಗುತ್ತೆ’’ ಅಂತ ಎಸ್​.ಎಂ ಕೃಷ್ಣ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES